Monday, 25 June 2012

ಯಡೂರಪ್ಪುಂಗೆ ಜಮೀನ್ ಬೇಕಂತೆ
ಯಣ್ಣ, ಯಡೂರಪ್ಪುಂಗೆ ಜಮೀನ್ ಬೇಕಂತೆ, ಕೊಟ್ಟಿಯ? ವಳ್ಳೆ ರೈಟ್ ಕೊಡ್ ಬೌದು
ಓಗಣ್ಣ, ಸದ್ದಿಕೆ ಸಿವವೊಗ್ಗದ ಸುತ್ತ ಯಡೂರಪ್ಪ, ಈಸ್ವುರಪ್ಪ ಸೇರಿಕಂಡು ಯಲ್ಲಾ ಜಮೀನ್ನೂ ತಗಂಡಿದ್ದರಂತೆ, ಇನ್ನೂ ಯಾಕಂತೆ ಜಮೀನು? ಜ್ವತಿಗೆ ನಮ್ ಅತ್ರ ಇರದು ತುಂಡು ಬೂಮಿ, ಅವ್ನಿಗೆ ಎಲ್ಲಿ ಸಾಕದತು ಇದು?
ಮತ್ತೆ ಪೇಪ್ರಲೇ ಆಕ್ಸವ್ನಪ್ಪ.
ಯಾವತ್ತು ನೋಡಿದೆ ನೀನು? ನಂಗೆ ಕಾಣದೇ ಇರದು ನಿಂಗೆ ಯಂಗಪ್ಪ ಕಂಡತು?
ನೀನು ಸರಿಯಾಗಿ ನೋಡು, ಯಡೂರಪ್ಪ ಜಮೀನಿಗಾಗಿ ಕೋರ್ಟಿಗೆ ಅರ್ಜಿ ಆಕ್ಯವ್ನೆ ಅಂತ ಅದೆ.
 ಓ! ನೀನ್ವಬ್ಬ ಯಡ್ಡ, ಅವ್ನು ವಬ್ಬ ಯಡ್ಡಿ. ನೀನು ಕನ್ನಡವ ಎಲ್ಲಿ ಕಲ್ತೆ ಏಳು ನೋಡನ?
ಯಾಕಣ್ಣ, ನಂಗೆ ಈತರ ಅವ್ ಮಾನ ಮಾಡ್ತಿಯ, ಯಾರದೋ ವಿಸ್ಯ ತಗಂಡು ನಂಗೆ ಅವ್ ಮಾನ ಮಾಡಂಗಿದ್ರೆ ನಾನು ಸುಮ್ಕಿರದಿಲ್ಲ.
 ಆಯ್ತು, ಬೇಜಾರ್ ಮಾಡ್ಕಬ್ಯಾಡ, ಏಳ್ತಿನಿ ಕೇಳು, ನೀನು ಓದಿರದು ಜಮೀನಲ್ಲ ಕಣಣ್ಣ, ಅದು ಜಾಮೀನು ಅಂತವ.
ಜಾಮೀನು ಅಂದ್ರೆ ಸ್ಪೀಟ್ ಮಾಡ್ತರಲ ಅದೆ? ಅದ ಕೋರ್ಟಿಗ್ಯಾಕೆ ಕೇಳಕೋದ, ಯಾರ್ನಾರ ಅಬಿಮಾನಿಗಳ ಕೇಳಿದ್ರೆ ಮಾಡಿಕೊಡರಪ್ಪ, ಜ್ವತಿಗೆ ಅವ್ನಿಗೆ ಸುಗರ್ ಅಯ್ತಂತೆ!
ನಾನು ಇನ್ನ ಸುಮ್ಕಿರಕೆ ಆಗದಿಲ್ಲ, ನಿಂಗೆ ಅರ್ತ ಆಗಂಗೆ ಏಳ್ತಿನಿ, ಜಾಮೀನು ಅಂದ್ರೆ ಪೋಲೀಸ್ನೋರು ಅರೆಸ್ಟ್ ಮಾಡ್ತರಲ, ಅದ ತಪ್ಪಿಸ್ಕಳಕೆ ಕೋರ್ಟಲಿ ಅರ್ಜಿ ಆಕಿ ಅರೆಸ್ಟ್ ಆಗದ ತಪ್ಪಿಸ್ಕಳದ್ಕೆ ಜಾಮೀನು ಅಂತರೆ.
ಓ.. ನಂಗೇನ್ ಅರ್ತ ಆಗ್ಬೇಕು ಏಳಣ್ಣ? ಮತ್ತೆ ದಿನಾ ಅದೇ ಪೇಪ್ರಲಿ ಬತ್ತಾ ಅದಲ್ಲ?ಅದು ಸಿಕ್ಕದು ಅಷ್ಟೊಂದು ಕಷ್ಟವೆ?
ದಿನಾ ಬತ್ತಾ ಅದೆ ಅನ್ನದೂ ನಿಜ ಕಣಣ್ಣ. ಒಂದ್ ಕೇಸಲಿ ಜಾಮೀನು ಸಿಕ್ಕಿದ್ರೆ ಇನ್ನೊಂದ್ ಕೇಸ್ ಸುರು ಆಯ್ತದೆ, ಅದ್ಕೆ ಜಾಮೀನು ಸಿಕ್ಕಿದ್ರೆ ಇನ್ನೊಂದು ಸುರು ಆಯ್ತದೆ, ಜ್ವತಿಗೆ ಇಂತ ಕೇಸಲಿ ಜಾಮೀನು ಸಿಕ್ಕದು ಅಷ್ಟು ಸುಲ್ಬ ಅಲ್ಲ. ಅಂಗಾಗಿ ಎಲ್ಲಿ ಅರೆಸ್ಟ್ ಮಾಡಿಬುಡ್ತರೋ ಅಂತವ ದಿನಾ
 
ಜಾಮೀನಿಗೆ ಅರ್ಜಿ ಆಕ್ತಾ ಅವ್ನೆ.
ಅದ್ಯಾಕಿಂಗ್ ಮಾಡಿಕಂಡ ಅಂತಿನಿ?
 ಯಲ್ಲ ಜಮಿನಿಗಾಗಿ, ಜಮೀನ ಮಾಡಿಕಳ್ಳಕೋಗಿ ಈಗ ಜಾಮೀನಿಗೆ ಅಲಿಯಂಗಾಗ್ಯದೆ.
ವಳ್ಳೆ ಜಮೀನು, ಜಾಮೀನು ಅಂತ ನನ್ ತಲೆ ತಿನ್ನಕೆ ಸುರು ಮಾಡಿಬುಟ್ಟೆ ಕಣಣ್ಣ ನೀನು, ನಿನ್ನ ಏನೂ ಕೇಳದೇ ಬ್ಯಾಡ ಅಂತ ಅನುಸ್ತಾ ಅದೆ.
ಅಂಗಲ್ಲ ಕಣಣ್ಣ, ಗೊತ್ತಿಲ್ದೇ ಇರದ ತಿಳ್ಳಳದ್ರಲಿ ಏನೂ ತಪ್ಪಿಲ್ಲ. ನಾನೂ ಏಳ್ತಾ ಇರದು, ಯಡೂರಪ್ಪ ಸಿಕ್ಕಾಬಟ್ಟೆ ಜಮೀನ ಮಾಡಕೋಗಿ, ಸಿಗಾಯ್ಕಂಡು ಈಗ ಜಾಮೀನಿಗೆ ಓಡಾಡ್ತಾ ಅವ್ನೆ ಅಷ್ಟೆಯ.


Updates from E.Basavaraju

Shtyle.fm
Hi E.Basavaraju,
Since the last time you were on Shtyle.fm, the following things have happened.
0 pending friend requests.
No friend invites.
Recent Friend Activity see all friend activity
E.Basavaraju and siddaravi are now friends.
Recent Profile Visitors see all visitors
No recent visitors.
New Comments see all comments
No new comments.
Upload and Share files
Share ringtones, songs, documents with your Shtyle.fm friends. Upload 100MB of files to share with your friends!
Visit Your Profile
Your Shtyle.fm login is ebasavraju.kjvs@blogger.com
Forgot password?

Sunday, 17 June 2012

ಹಾಲಿಕೆ ಇಷ್ಟ ಮಾಜಿಗೆ ಕಷ್ಟ
ಯಣ್ಣ, ಹಾಲಿಗೆ ಇಷ್ಟ, ಮಾಜಿಗೆ ಕಷ್ಟ, ಏನೇಳು?
ಓ.. ಈಗ ನೀನು ವಗಟು ಹಾಕಕೆ ಸುರು ಮಾಡಿದ್ದೀಯ ಅನ್ನು. ಮದ್ಲು ಹಾಲಿ-ಮಾಜಿ ಯಾರ್ಯಾರೇಳು, ಅಮ್ಯಾಲೆ ಇಷ್ಟ, ಕಷ್ಟದ ಬಗ್ಗೆ ಏಳ್ತೀನಿ.
ಇನ್ಯಾರಣ್ಣ? ಹಾಲಿ-ಮಾಜಿ ಮುಖ್ಯ ಮಂತ್ರಿಗಳು. ಈಗೇಳು?
ಇಷ್ಟ, ಕಷ್ಟ ಅಂದ್ರೆ ಸಿ.ಬಿ.ಐ ತನಿಕೆ ಇರ್ಬೇಕು.
ನನ್ ಮನಸ್ಸಿನಲ್ಲಿ ಇದ್ದುದ್ದೇ ಬ್ಯಾರೆ, ನೀನು ಏಳಿದ್ದೇ ಬ್ಯಾರೆ, ಆದ್ರೂ ಸಿ.ಬಿ.ಐ ಅಂತ ಯಂಗೇಳ್ದೆ ಏಳು ನೋಡನ?
ಇನ್ನೇನು ಸಿ.ಬಿ.ಐ ತನಿಕೆ ಆದಂಗೆ ಯಡ್ಯೂರಪ್ಪನ  ಗಮ್ನ ಮುಕ್ಯಮಂತ್ರಿ ಕುರ್ಚಿ ಬುಟ್ಟು ಬ್ಯಾರೆ ಕಡಿಕೆ ಓಯ್ತದೆ, ಆಗ ಸುಕವಾಗಿ ಕುರ್ಚಿ ಮ್ಯಾಲೆ ಕೂತ್ಕಬೌದು ಅಂತ ಹಾಲಿ ಮುಕ್ಯಮಂತ್ರಿ ಅನ್ಕಬೌದು.
ಓ.. ಅದೂ ಒಂತರ ಸರ್ಯಾಗೇ ಅದೆ ಅನುಸ್ತಾ ಅದೆ. ಆದ್ರೆ ನಾನು ಏಳಿದ್ದು ಜೈಲು!!
ಏನು! ಹಾಲಿ ಮುಕ್ಯಮಂತ್ರಿಗಳಿಗೆ ಜೈಲು ಅಂದ್ರೆ ಇಷ್ಟ ಅಂತೆ?
ಹೌದು ಕಣಣ್ಣ. ನಾನು ಜೈಲಿಗೂ ಓಗಕೆ ಸಿದ್ದನಾಗಿದ್ದೀನಿ, ಯಾರಾದ್ರೂ ಆಕ್ಸಿ ಅಂತ ಏಳ್ಯವ್ನೆ.
ಯಾಕೆ, ಯಾವ್ದಾದ್ರೂ ಕೇಸಲ್ಲಿ ಸಿಗಾಯ್ಕಂಡಿದ್ದನೆ?
ಸಿಗಾಯ್ಕಳಕೆ ಇವ್ನು ಯಾವುದಾದ್ರು ಫೈಲಿಗೆ ಸೈನ್ ಆಕಿದ್ರಲ್ವೆ? ಯಾರಾರ ಸ್ವಾಮಿ ಇದೊಂದ್ ಕ್ಯಲ್ಸ ಮಾಡಿಕೊಡಿ ಅಂತ ಓದ್ರೆ ಓ.. ಇದು ಸದ್ಯ ಆಗದಿಲ್ಲ ಮಾರಾಯ್ರೆ, ದಯವಿಟ್ಟು ಓಗಿ ಬನ್ನಿ ಅಂತ ಹಲ್ ಬುಡ್ತನಂತೆ. ಅದೇ ಯಡೂರಪ್ಪ ಯಾರ್ಯಾರ ಅವ್ರ ಕಡೆಯವ್ರು ಓದ್ರೆ ಅದಿಕಾರಿಗಳ್ನ ಕರ್ದು ರೀ.. ಇದ ಮಾಡ್ರಿ ಅನ್ನನಂತೆ. ಮಾಡಕೆ ಆಗದಿಲ್ಲ ಅಂದ್ರೆ ರೀ.. ಈ ಕ್ಯಲ್ಸ ಮಾಡಿಕೊಡಕೆ ಆಗದಿಲ್ಲ ಅಂದ್ರೆ ನಾನ್ಯಾಕಿಲ್ಲಿ ಕೂತ್ಕಬೇಕು, ಮಾಡ್ರಿ ಅಂತ ದಬಾಯ್ಸಿ ಮಾಡ್ಸನಂತೆ. ಅಂಗಾಗಿ ಅವ್ನು ಸಿಗಾಯ್ಕಂಡ. ಫೈಲಿಗೆ ಸೈನ್ ಆಕದೇ ಇರ ಸದಾನಂದಗೌಡ ಜೈಲಿಗೆಲ್ಲಿ ಓಯ್ತನೆ? ಸುಮ್ಕೆ ಜೈಲಿಗೋಯ್ತಿನಿ ಅಂದವ್ನೆ ಅಷ್ಟೆಯ.
ಅಂಗಂತ ಏಳಿರದ್ಕೆ ಯಳ್ಡ್ ಮೂರು ಅರ್ತ ಇರ್ತದೆ. ಸದಾನಂದಗೌಡ ಜೈಲಿಗೋಗಕೆ ಯಾಕಿಷ್ಟಪಟ್ಟನು, ಯಡೂರಪ್ಪ ಜೈಲಿಗೋಗದ ತಪ್ಪಿಸ್ಕಳಕೆ ಪಡಬಾರದ ಪಾಡು ಪಡ್ತಾ ಇರದ ನೋಡಿ ಅವ್ನ ಅಣಕಿಸ್ಕಳಕೆ ನಾನು ಜೈಲಿಗೋಕೆ ಸಿದ್ದ ಅಂತ ಅಂದಿರ್ತನೆ. ಜೈಲಿಗೋಗ ಪರಿಸ್ತಿತಿ ನಿಜವಾಗ್ಲೂ ಬಂದ್ರೆ ಅವ್ನೂ ಯದ್ರಿಕತ್ತನೆ.
ಯಣ್ಣ, ಸದಾನಂದಗೌಡ ಜೈಲಿಗೋಯ್ತಿನಿ ಅಂತ ಏಳಕೆ ಇನ್ನೊಂದು ಕಾರ್ಣ ಇರಬೌದು ಅನುಸ್ತದೆ.
ಅದೇನಣ್ಣ.
ನಿತ್ಯಾನಂದ!!
ಓಗಿ ಬಂದು ಅದೇನೋ ಮಾಡಿದ್ರು ಅನ್ನಂಗೆ ನೀನು ತಿರ್ಗ ನಿತ್ಯಾನಂದನ್ನ ಯಸ್ರು ಏಳ್ತಾ ಇದ್ದಿಯಲ ಯಾಕಣ್ಣ.
ನೋಡು ನಿತ್ಯಾನಂದ ಜೈಲಿಗೆ ನಗ್ತಾ ಓಯ್ತನ, ನಗ್ತಾ ಬತ್ತನೆ, ನಮ್ ಸದಾನಂದಗೌಡ್ನೂ ಯಾವಾಗ್ಲೂ ನಗ್ತನೇ ಇರ್ತನೆ. ಅಂಗಾಗಿ ಏನಾರ ಜೈಲಿಗೋಗ ಆಸೆ ಬಂದಿರಬೌದೇನೋ?
ಅದೇನೂ ಇಲ್ಲ, ಜೈಲಿಗೋದ್ರೆ ಜನರ ಬೆಂಬಲ ಜಾಸ್ತಿ ಸಿಕ್ತದೆ ಅಂತವ ಅನ್ಕಂಡಿರಬೌದು. ಯಾಕೆ ಅಂದ್ರೆ ಆಂದ್ರದಲ್ಲಿ ನೋಡು, ಜಗಣ್ಣ ಅನ್ನನು ಜೈಲಿಗೋಗಿ ಅವ್ರ ಕಡೇವ್ರೆಲ್ಲ ಗೆದ್ರಂತೆ. ಅದ್ಕೇನಾದ್ರೂ ಸದಾನಂದ ಗೌಡ ಅಂಗಂದಿರ್ ಬೌದು.
ಜೈಲಿಗೋದೋರ್ಯಲ್ಲಾ ಅಂಗಾಗಿಲ್ಲ, ಕ್ಯಲುವ್ರು ಜೈಲಿಗೋಗಿ ಆಚಿಗೆ ಬರದ್ಯಂಗಪ್ಪ ಅಂತ ಕ್ವರುಗ್ತಾ ಅವ್ರಂತೆ. 
ಅಂಗಾರೆ ಇದು ಬರಿ ಪ್ರಚಾರಕ್ಕಿರಬೌದು ಬುಡು.
ಯಡೂರಪ್ನೂ ಪಾಪ, ಒಂದ್ಸತಿ ಜೈಲಿಂದ ಬಂದ್ ಮ್ಯಾಲೆ ನಾನು ಇನ್ನೂ ಅನೇಕ  ಸಾರಿ ಜೈಲಿಗೆ ಓಗಕೆ ಸಿದ್ದ ಅಂದಿದ್ದ. ಈಗ ಜೈಲು ಅಂದ್ರೆ ಗಡ ಗಡ ಆಗ್ಯದಂತೆ. ಒಟ್ನಲಿ ವಬು ಜೈಲಿಗೋಗದು ಇನ್ವಬ್ರಿಗೆ ಎಲ್ಪಾಯ್ತದೆ ಅನ್ನದು ಮಾತ್ರ ನಿಜ. ನಡಿ, ನಾವಂತೂ ಜೈಲು ಕಡಿಕೆ ಮಕ ಆಕದು ಬ್ಯಾಡ.

Friday, 15 June 2012



ನಿನ್ಯಾನಂದನಿಗೆ ಬೇಲ್ ಸಿಕ್ತಂತೆ

ಯಣ್ಣ, ನಿತ್ಯಾನಂದನಿಗೆ ಬೇಲ್ ಸಿಕ್ತಂತೆ!

ಏನಣ್ಣ, ಬೇಲು, ಮಸಾಲೆ ಇದ್ಯಲ್ಲಾನು "ದೊಡ್ಡಸುದ್ದಿ" ಅಂತ ಏಳಕೆ ಬಂದಿದ್ದಿಯಲ, ನಿಂಗೆ ಇನ್ನೇನೂ ಕ್ಯಲ್ಸ ಇಲ್ವೆ

ಯಣ್ಣ, ನಿಂಗೆ ಸ್ವಲ್ಪ ತಿಳ್ವಳ್ಕೆ ಕಡ್ಮೆ ಅನ್ನದು ಇದ್ಕೆಯ,  ಬೇಲು ಅಂದ್ರೆ ಬೇಲ್ ಪುರಿ ಅಲ್ಲ, ಬೇಲು ಅಂದ್ರೆ ಜೈಲಿಗೋಗದ ತಪ್ಪಿಸ್ಕಳಕೆ ಕೋರ್ಟಿಂದ ಪರ್ಮಿಷನ್ ತರದು. ಯಡ್ಯೂರಪ್ಪ ಇಂತದೊಂದ್ ಬೇಲ್ ಸಿಕ್ಲಿಲ್ಲ ಅಂತವ ಪಾಪ ಸ್ವರಗಿ ಓಗ್ಯವ್ನೆ, ಗೊತ್ತಿದ್ದತೆ ನಿಂಗೆ?

ಆಯ್ತು, ನಮ್ ನಿತ್ಯಾನಂದ ವಳ್ಳೆ ಉಡ್ಗ, ಸ್ಕೂಲಿಗೋಗಿ ಪಾಟ ಮಾಡ್ತಾ ಅವ್ನೆ, ಅವ್ನು ಯಾಕೆ ಜೈಲಿಗೋಗಂಗೆ ಮಾಡ್ಕಂಡಿದ್ದನು?

ಯಣ್ಣ, ನೀನೆಲ್ಲಿದ್ದಿ ಅಂತವ? ನಿತ್ಯಾನಂದ ಅಂತ ಎಷ್ಟೇ ಜನ ಇರ್ಬೌದು, ಆದ್ರೆ ಸದ್ದಿಕೆ ನಿತ್ಯಾನಂದ ಅಂದ್ರೆ ನಿತ್ಯಾನಂದಸ್ವಾಮಿ ಅಂತವ!

ಓ.. ನಿಂಗೆ ಎದ್ದು ಬಿದ್ದೂ ಅವ್ನ ಸುದ್ದಿ ಬುಟ್ರೆ ಇನ್ನೇನೂ ಸುದ್ದೀನೇ ಇಲ್ಲ ಅನ್ನು? ನೀನೇನಾರ ಟಿ.ವಿ ಚಾನಲ್ ಓಪನ್ ಮಾಡಕೆ ಐಡ್ಯ ಮಾಡಿದ್ದೀಯ? 

ನಿಂದ್ವಲ್ಳೆ ಪ್ರಾಬ್ಲಮ್ಮಾಯ್ತಪ್ಪ, ಇನ್ನೇನ್ ಮಾತಾಡನೇಳು?

ಮಾತಾಡಕೆ ವಳ್ಳೆ ವಿಸ್ಯ ಅದೆ, ನೀನು ಯೋಚ್ನೆ ಮಾಡ್ತಾ ಇಲ್ಲ ಅಷ್ಟೆಯ. ಇನ್ನೊಂದ್ ಯಲೆಕ್ಷನ್ನು ಬತ್ತಾ ಐತೆ, ಅದ್ರ ಬಗ್ಗೆ ಯೋಚ್ನೆ ಮಾಡು!

ನೀನೇಳದೂ ಸರಿ ಅನುಸ್ತಾ ಅದೆ. ಯಾಕೋ ನಾಲಿಗೆ ಕೆಟ್ಟೋಗಿತ್ತು, ಆಗಾಗ್ಗೆ ಯಲೆಕ್ಷನ್ನು ಬತ್ತಾ ಇದ್ರೆ ಸಲ್ಪ ನಾಲಿಗೆ ತಂಪು ಮಾಡ್ಕಬೌದು.

ನೀನು ಯಲೆಕ್ಷನ್ನು ಅಂತಿದ್ದಂಗೆ ಅದ್ನೇ ಯೋಚ್ನೆ ಮಾಡ್ತಿಯಪ್ಪ. ಈಗ ಬಂದಿರ ಯಲೆಕ್ಷನ್ನು ಅಂತದ್ದಲ್ಲ, ನಾನು, ನೀನು ಓಟಾಕಂಗಿಲ್ಲ. ಯಮ್ಮೆಲ್ಲೆ, ಎಮ್ಮೆಲ್ಸಿಗಳು, ಎಂ.ಪಿ ಗಳು ಮಾತ್ರ ಓಟಾಕದು.

ಯಾರೇ ಓಟಾಕ್ಲಿ, ನಮ್ಮಂತೋರಿಗೆ ಏನಾರ ಸಿಕ್ಕಿದ್ರೆ ಸಾಕಪ್ಪ. ಈಗ್ಲೆ ನೋಡು! ಓದ್ವಾರ ಬಿ.ಎ ಓದಿರೋರು ಮಾತ್ರ ಒಟಾಕದು ಅಂದ್ರೂ ನಮಿಗೂ ಸಲ್ಪ ಸಿಕ್ತಪ್ಪ, ಅದ್ಕೆ ಅಂಗಂದೆ.

ಯಣ್ಣ, ಇದು ರಾಷ್ಟ್ರಪತಿ ಯಲೆಕ್ಷನ್ನು. ಇದು ಬ್ಯಾರೆ ಯಲೆಕ್ಷನ್ನಂಗಲ್ಲ, ಯಾರು ಜಾಸ್ತಿ ಎಂ.ಪಿ, ಯಮ್ಮೆಲ್ಲೆಗಳ ಮಡಿಕ್ಯಂಡಿದ್ದರೋ, ಅವ್ರು ನಿಲ್ಸಿರ ಕ್ಯಾಂಡಿಡೇಟೇ ಗೆಲ್ಲದು. ಅಮ್ಮಮ್ಮಾ ಅಂದ್ರೆ ಯಮ್ಮೆಲ್ಲೆಗಳಿಗೆ ಏನಾರ ಸಿಕ್ಕಿದ್ರು ಸಿಕ್ಬೌದು ಅಷ್ಟೆಯ.

ಇತ್ತಿತ್ಲಾಗೆ ಯಮ್ಮೆಲ್ಲೆಗಳಿಗೆ ಗುರುಬಲ ಜಾಸ್ತಿ ಆಗಿರಂಗದೆ. ನಮಿಗೆ ಕೈಮುಗ್ದು, ಅಡ್ಡಬಿದ್ದು ಐದು ವರ್ಸಕ್ಕೊಂದ್ ಸತಿ ಓಟಾಕಿಸ್ಕತರೆ. ಅವ್ರು ಮಾತ್ರ ಆಗಾಗ್ಗೆ ತಗತನೇ ಇರ್ತರೆ.

ಓಗ್ಲಿ, ನೀನು ಓಟಾಕಂಗಿದ್ರೆ ರಾಷ್ಟ್ರಪತಿ ಸೀಟಿಗೆ ಯಾರಿಗೆ ಓಟಾಕ್ತಾ ಇದ್ದೆ?

ಯಾರು ಅಂತ ಏಳ್ಳಿ,  ಜೋರಾಗಿ ಮಾತಾಡ ಜನ ಸಿಗದೇ ಕಷ್ಟ ಆಗ್ಯದೆ. ದಾಸತ್ಗಾರ ಬರ್ಬೇಕು. ಕೆ.ಆರ್.ನಾರಾಯಣ ಇದ್ರಲ ಅಂಗಿರ್ಬೇಕಪ್ಪ. ಈಗಿದ್ರಲ ಪ್ರತಿಬಾಪಾಟೀಲು, ಅವ್ರು ಇದ್ದುದ್ದೇ ಗೊತ್ತಾಗ್ಲಿಲ್ಲಪ್ಪ. ಬರೀ ಪಾರಿನ್ನಲೇ ಇದ್ರಂತೆ.

ಈಗ ನಾರಾಯಣ ಅನ್ನರು ಇಲ್ವಲ, ಇನ್ಯಾರಿಗೆ ಆಕ್ತಿದ್ದೆ ಏಳಣ್ಣ.

ಕ್ಯಲುವ್ರು ಮನವೋಹನಸಿಂಗ್ ಅಂತರೆ. ಆ ವಯ್ಯ ಪಾಪ ಎದ್ರೆ ಕೂತ್ಕಳಕಾಗದಿಲ್ಲ. ಕೂತ್ರೆ ಏಳಕ್ಕಾಗದಿಲ್ಲ. ಕ್ಯಲುವ್ರು ಅಬ್ದುಲ್ ಕಲಾಂ ಅಂತರೆ. ಆ ವಯ್ಯ ಮಕ್ಳಿಗೆ ಪಾಟ ಮಾಡದ್ಕೆ ಪರ್ವಾಗಿಲ್ಲ ಅನುಸ್ತದೆ. ದಾಸತ್ಕಾರ ಅಂದ್ರೆ ಲೋಕ್ ಸಬೆ ಅದ್ಯಕ್ಷ ಆಗಿದ್ನಲ ಸೋಮನಾತ ಚಟರ್ಜಿ ಅಂತವ, ಆ ವಯ್ಯ ಆದ್ರೆ ಪರ್ವಾಗಿಲ್ಲ. ನಾನು ಅಕಂಗಿದ್ರೆ ಅವ್ನಿಗೇ ಆಕ್ತಾ ಇದ್ದೆ. ಆದ್ರೆ ಅದ ನಾನು-ನೀನು ಓಟಾಕಂಗಿಲ್ಲ, ಅದೇನಾದತು ನೋಡನ ಬುಡು.

ಈಗ ಸದ್ದಿಕೆ ಇಂಗ್ ನಡೀಲಿ. ಮುಂದೆ ನಾವ್ಯಲ್ಲ ಓಟಾಕಂಗೆ ಕಾನೂನು ಮಾಡಿ ಅಂತ ಕೇಳನ ಬುಡು.

Welcome to Shtyle.fm

Hi E.Basavaraju,

Thanks for registering on Shtyle.fm.

You can login with the following information:

login email: ebasavraju.kjvs@blogger.com

password: The password you entered upon registering.

We hope you will have a good time on Shtyle.fm.

Share ringtones, songs, documents with your Shtyle.fm friends. 100MB of online storage space with your account.

Regards,
All of us at Shtyle.fm

Saturday, 9 June 2012

ಜೇನಿನ ಹೊಳೆಯೋ, ಹಣದ ಹೊಳೆಯೋ..
ಜೇನಿನ ಹೊಳೆಯೋ, ಹಣದ ಹೊಳೆಯೋ, ಸುಧೆಯೋ ಕನ್ನಡ ಸವಿ ಹಣವೋ..
ಯಣ್ಣ, ಇದೇನು? ಅದ್ಯಾರೋ ನಿತ್ಯಾನಂದಸ್ವಾಮಿ ಮ್ಯಾಲೆ ಕಾಣದಂತೆ ಮಾಯವಾದನು, ನಿತ್ಯಾನಂದ ಕೈಲಾಸ ಸೇರಿಕೊಂಡನೊ ಅಂತ ಹಾಡ್ ಬರ್ದವ್ರೆ. ಅಂಗೆ ನೀನು ಹಾಲಿನ ಮಳೆಯೋ ಅನ್ನದ ತಗಂಡೋಗಿ ಹಣದ ಹೊಳೆಯೋ ಅಂತಾ ಇದ್ದೀಯಲ, ಯಾಕೆ?
ನೀನು ದಿನಾ ಪೇಪರ್ ಓದ್ಬೇಕು. ಬಂಡ್ವಾಳದಾರ್ರು ದುಡ್ಡ ತಂದು ಬೆಂಗ್ಳೂರಲ್ಲಿ ಸುರೀತಾ ಅವ್ರಂತೆ, ಅದು ವಳೆ ತರ ಅರಿತಾ ಅದಂತೆ, ಅದ್ಕೆ ಈ ತರ ಹಾಡ್ ಹಾಡ್ತಾ ಇದ್ದೀನಿ.
ನೀನು ದಡ್ಡ, ದುಡ್ಡ ಚೆಲ್ಲಕೆ ಅವ್ರು ಕರ್ಣನ ವಂಸುದವ್ರೇನಲ್ಲ, ಲಾಬ ಬರಂಗಿದ್ರೆ ಮಾತ್ರ ದುಡ್ಡ ಆಚಿಗೆ ತಗಿತರೆ, ಇಲ್ಲ ಅಂದ್ರೆ ತಗ್ಯದೇ ಇಲ್ಲ.
ಮತ್ತೆ ಪೇಪ್ರಲಿ ಹಣ ಹರೀತಾ ಅದೆ ಅಂತ ಬರ್ದವ್ರೆ.
ಅವ್ರಿಗೇನ್ ಬರೀತರೆ. ಬಂಡ್ವಾಳ ಊಡವ್ರು ಸೇಟ್ರು ಇದ್ದಂಗೆ. ನೀನೆ ಕೇಳಿದ್ದಿಯಲ, ಸೆಟ್ರು ಬಿದ್ರು ಲಾಬ ಇಲ್ದೆ ಬೀಳದಿಲ್ವಂತೆ, ಅಂಗೆ ಈ ಬಂಡ್ವಾಳ್ ದಾರ್ರು. ಲಾಬ ಬರ್ಬೇಕು, ಸರ್ಕಾರದವ್ರು ಅವ್ರು ಕೇಳಿದ್ ಕಡೆ ಜಮೀನ್ ಕಡ್ಮೆ ರೇಟಿಗೆ ಕೊಡ್ಬೇಕು, ರಸ್ತೆ ಮಾಡಿಕೊಡ್ಬೇಕು, ಕರೆಂಟು, ನೀರ್ ಕೊಡ್ಬೇಕು. ಆಗ ದುಡ್ ಆಕ್ತರೆ. ಇಲ್ಲ ಅಂದ್ರೆ ಸುಮ್ಕಿರ್ತರೆ.  
ಅವ್ರು ಆಕಿದ್ರೋ ಇಲ್ವೋ ಅಂತ ಯಂಗ್ ತಿಳ್ಕಳದು?
ಮಾಹಿತಿ ಅಕ್ಕು ಅಂತ ಅದಲ, ಅದ್ರಲಿ ಆಕಿದ್ರೆ ಕಾಣ್ತದಂತೆ. 
ಇಂತದು ಹಿಂದೆ ಆಗಿತ್ತೆ?
ಓದ್ವರ್ಸನೂ ಆಗಿತ್ತು. ಆಗ ಯಡೂರಪ್ಪ ಇದ್ದ. ಆಗ್ಲೂ ಇಂಗೆ ಅರುಸ್ತಿವಿ ಅಂದಿದ್ರು, ಎಷ್ಟು ಅರಿತು, ಎಷ್ಟು ಅರಿಲಿಲ್ಲ ಅನ್ನದು ಗೊತ್ತಾಗ್ಲೇ ಇಲ್ಲ.
ಸದಾನಂದಗೌಡ ಅಲ್ಲಿಗೋಗ್ಬೇಕಾದ್ರೆ ಸೂಟು, ಟೈ ಆಕ್ಯಂಡೋಗಿದ್ನಲ ಯಾಕೆ?
ಯಾಕೆ ಅಂದ್ರೆ ಶರ್ಟು, ಪ್ಯಾಂಟು, ಪಂಚೆ ಆಕ್ಯಂಡೋದ್ರೆ ಒಂದ್ ಪೈಸಾನೂ ಕೊಡದಿಲ್ವಂತೆ, ಅದ್ಕೆ ಕೋಟು ಪ್ಯಾಂಟು, ಬೂಡ್ಸು ಆಕ್ಯಂಡೋಗದು.
ಯಡೂರಪ್ನೂ ಇಂಗೆ ಓಗಿದ್ನೆ?
ಅವ್ನೂ ಇಂಗೇ ಓಗಿದ್ದ. ಇಂತಿಂತಾ ಪೋಗ್ರಾಂ ಗೆ ಇಂತಿಂತಾ ಡ್ರಸ್ಸು ಅಂತ ಇರ್ತದೆ. ದೇವುಸ್ತಾನಕ್ಕೋಗ್ಬೇಕಾದ್ರೆ ಅಂಗಿ ತಗ್ದು ಟವಲ್ನೋ, ಪಂಚೆನೋ, ಸಾಲ್ನೋ ಆಕ್ಯಂಡೋಯ್ತರಲ, ಅಂಗೆ.
ಬಂಡ್ವಾಳ ಸೆಟ್ರತ್ರ ಸೂಟಾಕ್ಯಂಡೋದ್ರೆ ಏನು ಅಂತವ?
ಇವ್ನ ಅತ್ರ ಸಾಲ ಕೊಟ್ರೆ ವಾಪಸ್ ಬತ್ತದೆ ಅಂತ ಇರ್ಬೇಕು. ಒಟ್ನಲಿ ದುಡ್ ಕೊಡರು ಏನೇಳ್ತರೆ ಅಂಗೆ ಕೇಳ್ಬೇಕು.
ಏನೇ ಆಗ್ಲಿ, ನಮ್ ರಾಜ್ಯದ ಮುಕ್ಯಮಂತ್ರಿ ಅಂದ್ರೆ ರಾಜ ಇದ್ದಂಗೆ. ಬಂದಿರರ್ನ ಲೇ, ನಾನೇಳಿದಂಗೆ ಕೇಳಂಗಿದ್ರೆ ಬಲ್ಲಿ, ಇಲ್ಲ ಅಂದ್ರೆ ಇತ್ತಗೆ ಮಕ ಆಕ್ ಬ್ಯಾಡಿ ಅಂತ ಏಳ್ಬೇಕಾಗಿತ್ತು.
ಅದು ಅವ್ನ ಕೈಲಾಗದಿಲ್ಲ. ನಾನೂ-ನೀನೂ ಅದಿಕಾರಕ್ಕೆ ಬಂದ್ರೆ ನೋಡನ ನಡಿ.
ಈ.ಬಸವರಾಜು
ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ
9448957666 


ಸದಾನಂದಗೌಡ ಜಿಮ್ ಗೆ ಓಯ್ತನಂತೆ
ಯಣ್ಣ, ಸದಾನಂದಗೌಡ ಜಿಮ್ ಗೆ ಓಯ್ತನಂತೆ, ಅಂಥಾ ಪೈಲ್ವಾನ್ನೆ ಅವ್ನು?
      ಅವ್ನು ನೋಡಕೆ ಕಡ್ಡಿ ಪೈಲ್ವಾನ ಕಂಡಂಗೆ ಕಾಣ್ತನೆ, ಜ್ವತಿಗೆ ಕ್ಯಲ್ಸನೇ ಜಾಸ್ತಿ ಅಯ್ತದೆ, ಅಂತದ್ರಲಿ ಜಿಮ್ ಮಾಡಕೆಲ್ಲಿ ಓದನು? 
ಮತ್ತೆ ನೋಡನ ಅಂತವ ಅವ್ರ ಆಪೀಸ್ ಗೆ ಓಗಿದ್ದೆ, ಸಾಯಾಬ್ರು ಜಿಮ್ ಗೋಗ್ಯವ್ರೆ, ಈಗ ಸಿಕ್ಕದಿಲ್ಲ ಅಂತ ಏಳಿದ್ರು. ಅದ್ಕೆ ಅಂಗೆ ಅಂದೆ.
       ಲೇ, ನೀನು ಏನಂತ ಇದ್ದಿ ಅಂತ ಈಗ ಅರ್ತ ಆಯ್ತು. ಅದು ಜಿಮ್ ಅಂದ್ರೆ ವ್ಯಾಯಾಮ ಅನ್ಕಂಡಿದ್ದೀಯ ನೀನು?
 ಊ ಕಣಣ್ಣ.
      ನೀನು ದಡ್ಡ. ಜಿಮ್ ಅಂದ್ರೆ ವ್ಯಾಯಾಮ ಅಂತಲೂ ಆಯ್ತದೆ. ಆದ್ರೆ ಸದಾನಂದಗೌಡ ಓಗಿದ್ದು ಗ್ಲೋಬಲ್ ಇನ್ ವೆಸ್ಟರ್ಸ್ ಮೀಟ್ ಅಂತವ. ಅದ್ಕೆ ಜಿಮ್ ಅಂತರೆ.
ನೀನೇನೊ ಇಂಗ್ಲೀಸ್ ಕಲ್ತುಕಂಡು ಅದೇನೋ ಏಳ್ತಿಯ, ನಂಗೆ ಅರ್ತ ಆಗಂಗೆ ಏಳಣ್ಣ.
     ಅಂಗಂದ್ರೆ, ಪ್ರಪಂಚದಲ್ಲಿರೋ ಸ್ರೀಮಂತ್ರ ಕರ್ದು, ಊಟ, ತಿಂಡಿ, ಕಾಪಿ ಕೊಟ್ಟು, ನೀವು ನಮ್ ರಾಜ್ಯದಲ್ಲಿ ಬಂಡ್ವಾಳ ಹಾಕಿ ಅಂತ ಬೇಡಿಕಳ್ಳದು.
ನಾವು ಡಿಂಕದ ಮಾರಮ್ಮುನ ವಳ್ಳೇದ್ ಮಾಡವ್ವ ಅಂತವ ಬೇಡಿಕಳ್ತಿವಲ್ಲ ಅಂಗ?
      ಒಂತರ ಅಂಗೆಯ ಅನ್ನು. ಸ್ವಾಮಿ, ನೀವು ನಮ್ ರಾಜ್ಯದಲ್ಲಿ ಎಲ್ಲಿ ಬೇಕಾದ್ರು ಪ್ಯಾಕ್ಟ್ರಿ ಹಾಕಿ, ನಾವು ಜಮೀನ್ ಕೊಡ್ತಿವಿ, ನೀರ್ ಕೊಡ್ತಿವಿ, ಕರೆಂಟ್ ಕೊಡ್ತಿವಿ, ನೀವು ಸುಂಕ-ಗಿಂಕ ಕೊಡಬೇಕಾಗಿಲ್ಲ ಅಂತವ ಇವ್ರು ಸದಾನಂದಗೌಡ ಬೇಡಿಕತ್ತನೆ.  ಆಗ ಅವ್ರು ನಮ್ಗೆ    ಇಂತಿಂತ ಕಡೆ ಜಮೀನ್ ಕೊಡಿ, ನಾವು ಇಂತಿಂತ ಪ್ಯಾಕ್ಟ್ರಿ ಸುರು ಮಾಡ್ತಿವಿ ಅಂತರೆ.
ಅದ್ರಿಂದ ನಮ್ಗೇನ್ ಉಪ್ಯೋಗ?
ಉಡುಗ್ರಿಗೆ ಕ್ಯಲ್ಸ ಸಿಕ್ತದೆ, ಇನ್ನೂ ಏನೇನೋ ಉಪ್ಯೋಗ ಆಗಬೌದು.
ಜಮೀನೇ ಸಿಕ್ತಾ ಇಲ್ವಲ, ಅದೆಲ್ಲಿಂದ ತಂದ್ ಕೊಡ್ತನೆ ಸದಾನಂದಗೌಡ?
ರೈತ್ರು ಜಮೀನದಲ್ಲ, ಅದ್ನೆ ತಗಂಡು ಕೊಡ್ತನೆ?
ಮತ್ತೆ ರಾಗಿ ಬ್ಯಳ್ಯದು?
ರಾಗಿ ಏನ್ ಮಾಡಕ್ಕೆ? ಆಮೀನ್ ಮಾರಿ ದುಡ್ ಈಸ್ಕೊ, ಅಂಗ್ಡಿಗೋಗಿ ರಾಗಿ ತಗಂಡ್ ಬಾ, ಇನ್ನೂ ಕಷ್ಟ ಆದ್ರೆ ಅಂಗ್ಡಿಗೋಗಿ ಬ್ರೆಡ್ ತಗಂಡ್ ತಿನ್ನು.
ಯಣ್ಣ, ಯಾಕೋ ನೇನೇಳದು ನಮ್ಮ ಮುಗ್ಸಕೆ ಮಾಡಿರ ಪ್ಲಾನು ಅಂತ ಕಾಣ್ತದೆ. ನಮ್ಗೆ ಜಿಮ್ಮು ಅನ್ನದು ಬೇಕೇ ಬೇಕು ಅಂತಿಯ?
ನನ್ನ ಕೇಳಿದ್ರೆ, ಅವ್ರು ಬರ್ಲಿ. ಆದ್ರೆ ನಾವೇಳಿದಂಗೆ ಕೇಳ್ಬೇಕು, ಅವ್ರು ಏಳಿದಂಗೆ ನಾವು ಕೇಳದಲ್ಲ?
ಈಗ ಅವ್ರು ಏಳಿದಂಗೆ ಸದಾನಂದಗೌಡ ಕೇಳಂಗಿದ್ರೆ ಅವ್ನು ಪೈಲ್ವಾನ ಯಂಗಾದನು, ಕಡ್ಡಿ ಪೈಲ್ವಾನಾಯ್ತನೆ.

ಈ. ಬಸವರಾಜು 
ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ
9448957666 ಈಮೇಲ್:ebಚಿsಚಿvಡಿಚಿರಿu@gmಚಿiಟ.ಛಿom