Wednesday, 11 April 2012

ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ!


ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ!


ಯಣ್ಣ, ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಅಂದ್ರೇನು ಗೊತ್ತೆ?

ನೀನೇಳದು ವಗಟು ಕಣಣ್ಣ. ನಾನೂ ಯಾವ್ದೋ ನಾಟುಕ್ದಲ್ಲಿ ಇದ ಕೇಳಿದ್ದೀನಿ. ಆದ್ರೂ ಅತ್ರ ಆಗ್ವಲ್ದು.

ನೀನು ನಾಟಕದಲ್ಲಿ ಹಾಡೋವಾಗ ಕೇಳಿದ್ದೀಯ. ನಾನೆಲ್ಲಿ ಕೇಳಿದೆ ಗೊತ್ತೆ?

ಎಲ್ಲಿ ಕೇಳಿದ್ಯಪ್ಪ?

ನನಗೆ ಪರಿಚಯ ಇರೋ ಮಿನಿಷ್ಟ್ರ ಅತ್ರ ಏನೋ ಕ್ಯಲ್ಸ ಮಾಡಿಸ್ಕಳನ ಅಂತ ಓಗಿದ್ದೆ, ಅವ್ರು ಹಾಡತಾ ಕೂತಿದ್ರು.

ಅವ್ರಿಗೇನಂತೆ ಕಷ್ಟ? ಮಿನಿಷ್ಟ್ರೇ ಇಂಗ್ ಆಗಿಬುಟ್ರೆ ನಮ್ ಕತೆ ಏನಂತೆ?

ಅದೇನಪ್ಪ, ವಬ್ರೇ ರೂಮಲ್ಲಿ ಕೂತ್ಕಂಡು ಹಾಡ್ತಾ ಇದ್ರು.

ನೀನು ಏನ್ ಪ್ರಬುಗಳೇ ನಿಮ್ ಕಷ್ಟ? ಅಂತ ಕೇಳದಲ್ವೆ?

ಕೇಳಿದೆ. ಅದ್ಕೆ ಅವ್ರು ಏಳಿದ್ದೇನಪ್ಪ ಅಂದ್ರೆ; ಮಿನಿಷ್ಟ್ರಾಗಿ ಚನ್ನಾಗಿರನ ಅಂತ ಬಂದೆ. ಬರ ಅದ್ಯಯನ ಮಾಡಿಕಂಡು ಬನ್ರಿ ಅಂತ ಮುಖ್ಯಮಂತ್ರಿಗಳು ಕಳಿಸಿದ್ರು. ಅಲ್ಲಿ ಓಗಿ ಜನ ನೋಡಿಕಂಡು ಸನ್ಮಾನ ಮಾಡಿದ್ರೆ ಮಾಡಿಸ್ಕಂಡು ಬರನ ಅಂತ ಓದೆ. ಆದ್ರೆ ಅಲ್ಲಿ ಜನ ಅದಿಲ್ಲ, ಇದಿಲ್ಲ ಅಂತ ನನ್ನ ಸುತ್ತಿಗಂಡು ಮುಂದುಕ್ಕೋಗಕೇ ಬುಡ್ಲಿಲ್ಲ. ವಬ್ಬ ಅಸ ತಂದು ಮುಂದುಕ್ ನಿಲ್ಸಿ ಸ್ವಾಮಿ ಇದ್ಕೆ ಉಲ್ಲು ನೀರಿಲ್ಲ, ನೀವು ಗೋವುಗಳ ಪರವಾಗಿ ಮಾತಾಡ್ತಿರಲ ಏನ್ಮಾಡ್ಳಿ ಏಳಿ ಅಂದ. ವಬ್ ಹೆಂಗ್ಸು ಬಿಂದಿಗೆ ತಂದು ನೀರ್ ಕೊಟ್ಟು ಮುಂದುಕ್ಕೋಗಯ್ಯ ಅಂದ್ಳು. ಯಂಗೊ ಅಲ್ಲಿ ಇದ್ದ ನಮ್ಮ ಪೋಲೀಸ್ನರು ಬಚಾವ್ ಮಾಡಿ, ಸ್ವಾಮಿ ನೀವು ಓಡಿ ಅಂದ್ರು. ಅದ್ಕೆ ಇನ್ನ ಎಲ್ಲೂ ಓಗಕೆ ಬಯ. ನಮ್ ಮುಖ್ಯಮಂತ್ರಿಗಳು ಓಗ್ಲೇಬೇಕು, ಇಲ್ಲ ಅಂದ್ರೆ ನೀವು ಅವ್ರ ಕಡೆ ಇದ್ದೀರಿ ಅನ್ಕಬೇಕಾಯ್ತದೆ ಅಂತರೆ, ನಾನೇನ್ಮಾಡ್ಳಿ? ಅದ್ಕೆ ಈ ಹಾಡ ಹಾಡತಾ ಇದ್ದೀನಿ ಅಂದ್ರು ಕಣಣ್ಣ. ಆಗ ನಾನು ಅವ್ರ ಕೈಗೆ ಕಚ್ರಿಪ್ ಕೊಟ್ಟುಬುಟ್ಟು, ನನ್ ಸಮಸ್ಯೆ ಬಗೆಹರಿಸಕೆ ಇವ್ರ ಕೈಲಿ ಆಗದಿಲ್ಲ ಅಂದ್ಕಂಡು ಸುಮ್ಕೆ ಬಂದೆ.

ನೀನು ಇಂಗೆ ಯದಿಕ್ರಂಡು  ವಾಪಸ್ ಬಲ್ರಿ ಅಂತಲೇ ಮಿನಿಷ್ಟ್ರು ಅಂಗೆ ನಾಟ್ಕ ಆಡಿಬ್ರೇಕು.

ಏನಪ್ಪ, ಜನ ಏಳದ ನಂಬ್ ಬೇಕು ಅಷ್ಟೆಯ. ಅವ್ರ ಮನಸಿನ ವಳ್ಗೆ ಏನದೆ ಅಂತ ಯಂಗ್ ತಿಳ್ಕಳದು?

ಅದ್ಕೆ ಮದ್ಲಿದ್ದರೇ ಪವ್ರಾಗಿಲ್ಲ ಅಂತವ ವಬ್ಬ ಮಿನಿಷ್ಟ್ರು ಏಳ್ತಾ ಇದ್ರಪ್ಪ.

ಅದೇನಂತೆ?

ಯಲ್ಲಾನ್ರು ರಿಜಾಟಿಗೆ ಕಕ್ರಂಡೊಗಿ ಚನ್ನಾಗಿ ಮಡ್ಗಿದ್ರು, ಅಲ್ಲಿ ಸೊಂಪಾಗಿದ್ದೆ. ಊರಿಗೋದ್ರೆ ಜನ ಅದು ಇದು ಅಂತ ತಲೆ ತಿನ್ನರು. ಯಂಗೊ ಬ್ಯಾಸಿಗೆ ಕಳ್ಯತಕ ಇಲ್ಲೇ ಇರನ ಅನ್ಕಂಡು ಬಂದಿದ್ದೆ, ಈಗ ಅದ್ಕೂ ಕಲ್ ಬೀಳ್ತು ಅಂತವ ಬೇಜಾರ್ ಮಾಡಿಕಂಡಿದ್ರು.

ಅಲ್ಲ ಕಣಣ್ಣ. ಓಟಾಕಿಸ್ಕಳ್ವಾಗ ಏನ್ ಬೇಕು ಅದ್ನೆ ಕೊಡ್ತಿನಿ ಅಂತರೆ, ಈಗ ನೀರ್ ಕೊಡಿ ಅಂದ್ರೂ ಕೊಡಕಾಯ್ತಾ ಇಲ್ಲ. ಅದ್ನೂ ಕೇಳದು ತಪ್ಪೆ? ಜನಕ್ಕೆ ತ್ವಂದ್ರೆ ಮ್ಯಾಲೆ ತ್ವಂದ್ರೆ ಆಗಿ ರೋಸೋಗ್ಯವ್ರೆ. ಅದ್ಕೆ ಯಾರಾರ ಬಂದ್ರು ಸಾಕು ಮ್ಯಾಲೆ ಬೀಳಕೋಯ್ತರೆ.

ಈಗೇನೋ ಊರಿಗೋದ್ರೆ ಮ್ಯಾಲ್ ಬೀಳ್ತರೆ. ಅಲ್ಲಿಗೋಗ್ದೇ ಓದ್ರೆ ಅವ್ರೇ ಉಡಿಕಂಡ್ ಬತ್ತರೆ. ಆಗೇನ್ ಮಾಡ್ತರೋ ಗೊತ್ತಿಲ್ಲ. ಆದ್ರಿಂದ ಜನವ ಉಡಿಕಂಡೋಗಿ ಬೈಸಿಕಂಡು ಬರದೇ ವಳ್ಳೇದೇನಪ್ಪ.

- ಈ.ಬಸವರಾಜು

No comments:

Post a Comment