Thursday, 19 April 2012

ಇದೇಳಕೆ ಆ ವಯ್ಯನೇ ಬೇಕಿತ್ತೆ?


ಇದೇಳಕೆ ಆ ವಯ್ಯನೇ ಬೇಕಿತ್ತೆ?

ಯಣ್ಣ, ಇದೇಳಕೆ ಆ ವಯ್ನೇ ಬೇಕಿತ್ತೆ? ಯಾರಾದ್ರೂ ಏಳಬೌದಪ್ಪ!

ಯಾರು ಏನೇಳಿದ್ರಣ್ಣ?

ಅದೇ ಆ ಕೋಡಿ ಮಟದ ಸ್ವಾಮಿ ಕಣಣ್ಣ.

ಏನಂದ್ನಣ್ಣ ಆ ವಯ್ಯ.

ಮಳೆ ಉಯ್ಯೋ ಕಡೀಕೆ ಉಯ್ತದೆ, ಕ್ಯಲುವ್ ಕಡಿಕೆ ಉಯ್ಯದಿಲ್ಲ ಅಂದವ್ನೆ.

ಅದ ವಯಸ್ಸಾಗಿ ಅನುಬವ ಇರ ಯಲ್ರೂ ಏಳ್ತರಪ್ಪ.

ಅದ್ಕೇ ನಾನು ಏಳಿದ್ದು, ಇದ ಏಳಕೆ ಆ ವಯ್ನೇ ಬೇಕಿತ್ತೆ ಅಂತವ.

ಇನ್ನೇನೇಳಿದ್ನಂತೆ?

ಒಂದೊಂದ್ ಕಡೆ ಬೂಕಂಪ ಆಗಬೌದು, ರೈಲು ಆಕ್ಸಿಡೆಂಟ್ ಆಗಬೌದು, ದ್ವಡ್ಡ ದ್ವಡ್ಡ ಊರುಗಳಲ್ಲಿ ಬೆಂಕಿ ಹತ್ತಿಕಂಡು ಉರಿಬೌದು, ನೂರಾರ್ ಜನ ಪ್ರಾಣ ಕಳ್ಕೋಬೌದು, ಇನ್ನೂ ಕ್ಯಲುವ್ರು ರಾಜಕೀಯದವ್ರು 
ಜೈಲಿಗೋಯ್ತರೆ, ಸದಾನಂದಗೌಡುಂಗೆ ಕಷ್ಟ ಬತ್ತದೆ, ರೈತ್ರು ಕಷ್ಟಪಟ್ಟು ದುಡುದ್ರೆ ಮಾತ್ರ ಬೆಳೆ ಬತ್ತದೆ, ಅಂತ ಏಳ್ಯವ್ನೆ.

ಯಣ್ಣ, ಇದ್ಕೆ ನಗ್ಬೇಕೋ, ಅಳ್ಬೇಕೋ ಒಂದೂ ಗೊತ್ತಾಯ್ತಾ

ಇಲ್ಲ.

ಪೇಪ್ರಿನವ್ರು ಅದೇ ದ್ವಡ್ ಸುದ್ದಿ ಅಂತ ಆಕದು, ಅದ ನೋಡಿ ಕ್ಯಲುವ್ರು ಯದ್ರಿಕಂಡು ಮಂತ್ರ, ಓಮ ಮಾಡದು ಇದ್ಯಲ್ಲ

ಏನಣ್ಣ?

ಅದೇನೋ, ಈ ಸ್ವಾಮಿಗಳು, ಜ್ಯೋತಿಷ್ಯ ಹೇಳರು ಬರೀ ಇಂತವ್ನೇ ಏಳ್ತಾ ಇರ್ತರಲ, ಇವ್ರಿಗೆ ವಳ್ಳೇ ಮಾತೇ ಬರದಿಲ್ವೆ? ಬದ್ಕ ಆಸೆ ಇಲ್ವೆ?

ಅವ್ರಿಗೆ ಬದ್ಕಕೆ ಆಸೆ ಇರ್ತದೆ, ಇನ್ವಬ್ರು ಸಂತೋಸ್ವಾಗಿ ಬದ್ಕದು ಬ್ಯಾಡ ಅಂತ ಇವ್ರು ಇಂಗ್ಯಲ್ಲ ಏಳದು. ನಾನೇಳ್ತಿನಿ, ಆ ವಯ್ಯ

ಏಳ್ದೇ ಇರದು ಇನ್ನೂ ಅದೆ, ಅದ ನಾನೇಳ್ತಿನಿ.

ಇನ್ನೂ ಏನೇನ್ ಉಳ್ದದಣ್ಣ?

ಏರೋಪ್ಲೇನ್ ಆಕ್ಸಿಡೆಂಟ್ ಆಯ್ತದೆ, ದೋಣಿ ಮುಳುಗ್ತವೆ, ಮದ್ವಿಗೋದವ್ರು ದಿನಾ ನಡ್ಯದ ಆ ವಯ್ಯ ನಡೀಬೌದು ಅಂತ ಏಳದು,

ಮಸಾಣಕ್ಕೋಗಬೌದು, ಸಾವಿಗೋದವ್ರು ಯಣವಾಗಬೌದು, ಒತ್ಕಂಡೋಯ್ತರೆ, ಮಾನವ ಬಂಬುಗಳು ಜಾಸ್ತಿಯಾಯ್ತವೆ, ಒಂದ್ ಪೆಟ್ರೋಲು ಉಟ್ಕತ್ತದೆ. ಇಂಗೆ ಏಳ್ತಾ ಓಗಬೌದು. ಇದ್ಕೆ ಕಾಮನ್ ಸೆನ್್ಸ ಅಂತರೆ. ಅದೇಳಕೆ ಸ್ವಾಮಿಗಳೇ ಬೇಕಿಲ್ಲ.

ಇನ್ನೂ ಒಂದೇಳಬೌದು, ಅದ್ನೇ ಬುಟ್ಯಲ್ಲಣ್ಣ?

ಏನಣ್ಣ ಅದು?

ಕೋಡಿ ಮಟದ ಸ್ವಾಮಿಗಳು ಒಂದಿಲ್ಲ ಒಂದಿನ ಸತ್ತೋಯ್ತರೆ!

- ಈ.ಬಸವರಾಜು

--
E.Basavaraju
Mandara, 4th main, Rukmininagar
Nagasandra post,  Bangalore-560012
9448957666


No comments:

Post a Comment