Monday, 30 April 2012



ಬಂಗಾರ ಜೈಲಿಗೋಯ್ತದಂತೆ!
ಬಂಗಾರ ಬಂಗಾರ, ಜೈಲಿಗೋಯ್ತು ಬಂಗಾರ..
ಏನಣ್ಣ, ವಸ ಹಾಡ ಹಾಡ್ತಾ ಇದ್ದೀಯ, ಬಂಗಾರದ ಬ್ಯಲೆ ದಿನೇ ದಿನೇ ಮ್ಯಾಕೇರ್ತಾ ಅದೆ, ಅಂತದ್ರಲಿ ಜೈಲಿಗೆ ಯಂಗೋದತು?
ಬಂಗಾರ ಅಂದ್ರೆ ಚಿನ್ನ ಅಲ್ಲ ಕಣಣ್ಣ, ಬಂಗಾರ ಲಕ್ಷ್ಮಣ ಅಂತವ.
ಅದ್ಯಾರಪ್ಪ ಬಂಗಾರದಂತ ಲಕ್ಷ್ಮಣ?
ಅವ್ನು ಒಂದ್ ಕಾಲ್ದಲಿ ಬೀಜೇಪಿ ಪಕ್ಷಕ್ಕೆ ದ್ವಡ್ ಲೀಡ್ರು. ಈಗ ಜೈಲಿಗೋಗು ಅಂತವ ಕೋಟ್ರು ಏಳ್ಯದೆ. ಓಗ್ಲೋ ಬ್ಯಾಡ್ವೋ ಅಂತ ಯೋಚ್ನೆ ಮಾಡ್ತಾ ಅವ್ನಂತೆ.
ಅಲ್ಲ ಕಣಣ್ಣ, ಒಂದ್ಸÀತಿ ಕೋಟ್ರು ಜೈಲಿಗೋಗಯ್ಯ ಅಂದಮ್ಯಾಲೆ ಯೋಚ್ನೆ ಮಾಡದೇನ್ ಬಂತು? ಓಗು ಅಂದ್ ಮ್ಯಾಲೆ ಓಯ್ತಾ ಇರ್ಬೇಕು ಅಷ್ಟೆಯ. ಅದಿಲ್ರಿ, ಬೀಜೇಪಿ ಅದ್ಯಕ್ಷ ಆಗಿದ್ದ ಅಂತ ಜೈಲಿಗೆ ಕಳ್ಸÀದು ತಪ್ಪಲ್ವೆ?
ಬರೀ ಬೀಜೇಪಿಗೆ ಅದ್ಯಕ್ಷ ಆಗಿದ್ರೆ ಜೈಲಿಗೋಗು ಅಂತ ಯಾಕ್ ಏಳ್ತಿದ್ರು? ಅವ್ನು ಅದ್ಯಕ್ಷ ಆಗಿದ್ದಾಗ ನಾಕ್ ಕಾಸ್ ಲಂಚಕ್ಕೆ ಕೈ ಒಡ್ಡಿದ್ನಂತೆ, ಅದ ಯಾರೋ ಪೋಟ ವಡ್ಕಂಡು ಯಲ್ಲಾಗ್ರು ತೋರಿಸಿದ್ರಂತೆ. ಆಗ ಅವ್ನು ಬೀಜೇಪಿ ಲೀಡ್ರು ಜಾಗುಕ್ಕೆ ರಾಜೀನಾಮೆ ಕೊಟ್ಟು ಯಾರಿಗೂ ಕಾಣ್ದಂಗೆ ಪಾಂಡವ್ರು ಅಜ್ವಾನವಾಸಕೋಗಿದ್ರಲ ಅಂಗೆ ಎಲ್ಲೋ ಓಗಿ ಅಡತ್ಕಂಡಿದ್ನಂತೆ. ಈಗ ಕೋಟ್ರು ನೀನು ಮಾಡಿರದು ತಪ್ಪು, ನಾಕ್ ವಸ್ರ ಜೈಲಿಗೋಗು ಅಂತ ಏಳ್ಯದಂತೆ.
ನಾಕ್ ಕಾಸ ಈಸ್ಕಂಡಿದ್ಕೆ ಜೈಲಿಗಾಕದು ತಪ್ಪಲ್ವೆ?
ನಾಕ್ ಕಾಸು ಅಂದ್ರೆ ನಾಕ್ ಕಾಸಲ್ಲ ಕಣಣ್ಣ. ಒಂದ್ ಲಕ್ಷ ಈಸ್ಕಂಡಿದ್ನಂತೆ. ಈಗ ನಡೀತಾ ಇರೋ ನೂರಾರು ಕೋಟಿ ಲಂಚದ ವ್ಯವಾರಕ್ಕೆ ಓಲ್ಸಿದ್ರೆ ಅದು ಕಾಸಿದ್ದಂಗೆ, ಅದ್ಕೆ ಅಂಗದೆ.
ಅದ್ಕೆ ಬೀಜೇಪಿಯವ್ರು ಏನಂತ ಇದ್ದರು?
ಯಾರೇ ತಪ್ಪು ಮಾಡ್ಲಿ, ಅವುರ್ನ ನಮ್ ಪಕ್ಷದಿಂದ ಒಂದು ನೂರು ಕಿಲೋಮೀಟ್ರು ದೂರದಲ್ಲಿ ಮಡುಗ್ತಿವಿ ಅಂತ ಅನಂತಕುಮಾರ ಏಳಿದ್ದನಂತೆ. 
ಮತ್ತೆ ಅದ್ಯಾರೋ ಏಳ್ತಿದ್ರು, ಬಂಗಾರ ಲಕ್ಷ್ಮಣ ಬೀಜೇಪಿಗೆ ಲೀಡ್ರಾಗಿರದು ಅದ್ಯಾರಿಗೊ ಇಷ್ಟ ಇಲ್ರಿಲ್ವಂತೆ, ಅದ್ಕೆ ಅವ್ರೇ ಅವುನ್ನ ಇಡಿಸ್ಯಾಕಿದ್ರಂತೆ ಅಂತವ?
ಅದೇನೋ ನಂಗೊತ್ತಿಲ್ವಪ್ಪ, ಈಕಾಲ್ದಲಿ ಯಾರು ಯಾರಿಗೆ ಚೂರಿ ಆಕ್ತರೆ ಅಂತವ ಗೊತ್ತಾಗ್ವಲ್ದು. ಆದ್ರೆ ಅನಂತಕುಮಾರ ಮಾತ್ರ ಕಡ್ಡಿ ಯಳ್್ಡ ತುಂಡಾದಂಗೆ ಮಾತಾಡ್ಯವ್ನಪ್ಪ.
ಅವ್ನೂ ಮಿನಿಸ್ಟ್ರಾಗಿದ್ದಾಗ ಕೋಟಿಗಟ್ಲೆ ದುಡ್ಡ ವಡುದ್ನಂತೆ?
ಅದು ಅಳೆ ಕೇಸು. ಜ್ವತಿಗೆ ಯಾರೂ ಕೋಟ್ರಿಗೋಗಿ ಕೇಸಾಕಿಲ್ಲ ಅನುಸ್ತದೆ, ಅಂಗಾಗಿ ಅವ್ನು ಈಗ ಸಾಬಸ್ತ ಅನ್ನಂಗೆ ಮಾತಾಡಂಗಾಗ್ಯವ್ನೆ.
ಮತ್ತೆ ಯಡೂರಪ್ಪ ಅವ್ರು ಮುಕ್ಯಮಂತ್ರಿ ಆಗದು ಕಷ್ಟ ಅನ್ನು?
ಅನಂತಕುಮಾರ ಅದ್ನೆ ಏಳಿರದು. ನಾವು ಯಡೂರಪ್ಪುಂಗೆ ಇನ್ನ ಜಾಗ ಕೊಡದಿಲ್ಲ ಅಂತವ.
ಯಡೂರಪ್ನಂತ ಬಂಗಾರಗಳು ಬೀಜೇಪಿಲಿ ಜಾಸ್ತಿ ಇದ್ದವಂತಲ, ಯಲ್ಲಾರ್ನೂ ಕಳಿಸಿದ್ರೆ ಅಲ್ಲಿ ಇರೋರ್ಯಾರು?
ಆಳೂರಿಗೆ ಉಳಿದೋನೇ ಗೌಡ ಅಂತ ಯಾರೋ ವಬ್ರು ಇತ್ರರೆ ಬುಡು.
- ಈ.ಬಸವರಾಜು, ಮಲ್ಲೇನಹಳ್ಳಿ
ಕಾಯ್ರದಶ್ರಿ, ಕನ್ರಾಟಕ ಜಾÕನ ವಿಜಾÕನ ಸಮಿತಿ
ಈಮೇಲ್: ebಚಿsಚಿvಡಿಚಿರಿu@gmಚಿiಟ.ಛಿom
9448957666

No comments:

Post a Comment