ಕೊಟ್ಟುಬರಬಾದ್ರೆ?
ಸೋನಿ ಗಾಂದಿಗೆ ತಲೆ ನೋವು ಬಂದ್ರೆ ನೋಡಕೆ ಸಾವ್ರ ಜನ
ಡಾಕ್ಟ್ರೇ ಬತ್ತರೆ, ಅಂತದ್ರಲರ್ಲಿ ನಾನು ಕೊಡೊ ಔಸ್ತಿಯ ಯಾರ್
ಕೇಳ್ತರೆ ಬುಡಣ್ಣ.
ತಲೆ ನೋವಿಗೆ ಕೈ ಔಸ್ತೀನೇ ವಳ್ಳೇದಂತಪ್ಪ, ಜೊತಿಗೆ ನಿನ್
ಕೈಗುಣವೂ ಚನ್ನಾಗ್ಯದೆ, ಅದ್ಕೆ ಅಂಗಂದೆ.
ಸೋನಿ ಗಾಂದಿ ಅದ್ಯಾವ್ದೋ ಕಾಯ್ಲೆ ಬಂದು ಪಾರಿನ್ ಗೆ ಓಗಿ ತೋರಿಸ್ಕಂಡ್
ಬಂದಿತ್ತ್ತಿಲ್ವೆ ?
ಓಗಿ ತೋರಿಸಿದ್ದೂ ಆಯ್ತು, ಉಸಾರ್ ಮಾಡಿಕಂಡು ಬಂದೂ ಆಯ್ತು. ಈಗ
ಇದ್ಕಿದ್ದಂಗೆ ತಲೆ ನೋವಂತೆ.
ತಲೆ ನೋವಲ್ಲಿ ತರಾವರಿ ಅದೆ, ಒಂದೊಂದ್ ತರದ ತಲೆ ನೋವು
ಒಂದೊಂದ್ ಕಾರಣಕ್ಕೆ ಬತ್ತದೆ, ಸೋನಿ ಗಾಂದಿಗೆ ಯಂತ ತಲೆ
ನೋವೋ ಗೊತ್ತಿಲ್ಲಪ್ಪ, ಏನಾರ ಟೆನ್ಸನ್ ಗೆ ಬಂದಿರಬೌದು.
ನಾವೇನೋ ಉಪ್ಪಿಗ್ಯಂಗಪ್ಪ, ಸಾರಿಗ್ಯಂಗಪ್ಪ್ಪ ಅನ್ನಂಗಿದ್ದಿವಿ, ನಮ್ಗೆ
ಟೆನ್ಸನ್ನು. ಸೋನಿಗಾಂದಿಗೆ ಪ್ರದಾನಿ ಮಂತ್ರಿನೂ ಓಗಿ ಮೇಡಂ ಗುಡ್
ಮಾನ್ರಿಂಗ್ ಅಂತ ದಿನಾಲು ಬಂದು ಏಳಿ ಓಯ್ತನಂತೆ, ಇನ್ನ ಟೆನ್ಸನ್ ಯಾಕೆ
ಅಂತಿನಿ.
ಅದು ಅವ್ರ ಪಕ್ಷ ಅದಿಕಾರದಲ್ಲಿರ ರಾಜ್ಯಗಳಲ್ಲಿ
ಮುಖ್ಯಮಂತ್ರಿಗಳವ್ರಲ, ಅವ್ರೇ ತಲೆ ನೋವಂತೆ!
ಅವ್ರು ಯಂಗಣ್ಣ ತಲೆ ನೋವಾಯ್ತರೆ, ವಬ್ಬ ಮುಖ್ಯಮಂತ್ರಿ ಅವ್ನೆ
ಅಂದ್ರೆ ಎಷ್ಟೊಂದ್ ಸೌಕಯ್ರ ಸಿಗ್ತದೆ, ಅಂತದ್ರಲಿ ಅವ್ರೇ ತಲೆ ನೋವು
ಅಂದ್ರೆ ಯಂಗೆ?
ಅವ್ರು ಜನ ಸೈ ಅನ್ನಂಗೆ ಕ್ಯಲ್ಸ ಮಾಡ್ತಾ ಇಲ್ವಂತೆ, ಮುಂದೆ
ಯಲೆಕ್ಷನ್ ಬಂದ್ರೆ ಎಂ.ಪಿ ಸೀಟ ಗೆಲ್ಲಿಸ್ಕೊಡದು ಕಷ್ಟ ಅಂತೆ, ಅದ್ಕೆ
ತಲೆ ನೋವಂತೆ.
ಅಂಗಾರೆ ಅವ್ರನ್ನೆ ಬದಲಾಯಿಸದಪ್ಪ. ಆಗ ತಲೆ ನೋವೇ ಇರದಿಲ್ಲ.
ಬದಲಾಯಿಸದ್ರಿಂದ ತಲೆ ನೋವು ಓಗ್ಲೂ ಬೌದು, ಒಂದೊಂದ್ ಸತಿ
ಜಾಸ್ತಿನೂ ಆಗಬೌದು, ಅದ್ಕೆ ಸೋನಿ ಗಾಂದಿ ಯದ್ರಿಕಂಡಿರಬೌದು.
ನೋಡ್ರಯ್ಯ, ನೀವು ಸರಿಯಾಗಿ ಕ್ಯಲ್ಸ ಮಾಡ್ತಾ ಇಲ್ಲ, ಮುಂದೆ
ಯಲೆಕ್ಷನ್ ಬಂದ್ರೆ ನೀವು ಸೀಟ ಗೆಲ್ಲಿಸಿ ಕೊಡಕಾಗದಿಲ್ಲ. ಅಂತ ಏಳಿಬುಟ್ರೆ
ಏನಾಯ್ತಳೆ?
ಆಗ ಅವ್ರು ನಿನ್ನ ಮಗ ಉತ್ತರ ಪ್ರದೇಶದಲ್ಲಿ ಅಷ್ಟೊಂದ್ಯಲ್ಲ
ಓಡಾಡಿ ಗೆದ್ದುದ್ ನೋಡಿದ್ರೆ ಅಷ್ಟೆಯ. ಇದ್ಕೇನಂತಿರಿ ಅಂತವ
ಯಾರ್ಯಾರ ಕ್ವಚನ್ ಮಾಡಿದ್ರೆ ಆಗ ಇನ್ನೊಂದ್ ತರದ ತಲೆ
ನೋವು ಬಂದತು ಅಂತ ಬಯವಂತೆ.
ಓಗ್ಲಿ ನಮ್ ಕನ್ರಾಟಕದವ್ರು ಯಾರೂ ತಲೆ ನೋವಾಗಿಲ್ವಂತೊ?
ಇಲ್ಲೂ ತಲೆ ನೋವದಂತೆ. ಆದ್ರೆ ಇಲ್ಲಿ ಅದಿಕಾರದಲ್ಲಿಲ್ವಲ, ಅದ್ಕೆ
ಸರಿಯಾಗಿ ಕಾಣ್ತಾ ಇಲ್ವಂತೆ. ಆದ್ರೂ ಅಮಾಸೆ, ಹುಣ್ಮೆ ಟೈಮಲ್ಲಿ
ಕನ್ರಾಟಕ ತಲೆ ನೋವು ಅಂತವ ಸೋನಿಗಾಂದಿಗೆ ಬಂದದಂತೆ.
ಆಗ ಎಸ್.ಎಂ.ಕೃಷ್ಣ, ಕಗ್ರೆ ಓಗಿ ಹಸಿನಾಲ್ನಲಿ ಅದ್ಯಂತದೋ ಔಸ್ತಿ
ಕೊಟ್ಟರಂತೆ, ಆಗ ಸರಿಯಾಯ್ತದಂತೆ.
ಏನೇ ಆದ್ರು ಈ ತಲೆ ನೋವು ಅನ್ನದು ಬರಬಾದ್ರು ಕಣಪ್ಪ, ಜಲ್ದಿ
ಓಗದಿಲ್ಲ.
No comments:
Post a Comment