ಸಜಾತಿಯ ಧೃವಗಳು ಸೇರುವುದಿಲ್ಲ
ಯಣ್ಣ, ನಿಂಗೆ ಅಯಸ್ಕಾಂತ ಗೊತ್ತೆ?
ಇದೇನಣ್ಣ, ಇಂಗಂತಿಯ, ನಾನೇನ್ ಆಟ ಆಡ ಉಡುಗ್ನೆ, ನಾನ್ಯಾಕೆ ಅದ್ರ ಬಗ್ಗೆ ತಿಳ್ಕಳಕೆ ಓಗ್ಲಿ?
ಅಂಗಲ್ಲ ಕಣಣ್ಣ, ಅದು ಆಟ ಆಡಕೆ ಮಾತ್ರ ಅಂದ್ಕ ಬ್ಯಾಡ. ಅದ್ರಿಂದ್ಲೇ ಪ್ಯಾನು, ಮಿಕ್ಸಿ, ಟಿ.ಸಿ, ಜನರೇಟರ್ ಯಲ್ಲ ಕ್ಯಲ್್ಸ ಮಾಡದು. ಅಯಸ್ಕಾಂತ ಅನ್ನದು ಬಾಲ ಮುಕ್ಯವಾದದ್ದು.
ಅಯ್ತು, ಈಗ ಅದ್ರ ಬಗ್ಗೆ ಯಾಕೆ ಮಾತು ಅದೇಳು?
ಅಯಸ್ಕಾಂತಕ್ಕೆ ಒಂದ್ ತರ ಗುಣ ಅದೆ. ಒಂದ್ ಅಯಸ್ಕಾಂತದ ಒಂದ್ ತುದಿಗೆ ಉತ್ತರ ದ್ರುವ ಅಂತರೆ, ಇನ್ನೊಂದ್ ತುದಿಗೆ ದಕ್ಷಿಣ ದ್ರುವ ಅಂತರೆ. ಅಯಸ್ಕಾಂತವ ನ್ಯಾತಾಕಿದ್ರೆ ಉತ್ರ, ದಕ್ಷಿಣದ ಕಡಿಕೆ ನಿಂತ್ಕತದೆ.
ನೀನೇನೋ ಅಯಸ್ಕಾಂತದ ಬಗ್ಗೆ ನಂಗೆ ಪಾಟ ಮಾಡಂಗೆ ಕಾಣ್ತಾ ಇದ್ದೀಯಪ್ಪ. ಅದೇನು ಜಲ್ದಿ ಏಳಣ್ಣ.
ಸಲ್ಪ ಕೇಳು. ಅಯಸ್ಕಾಂತದ ವಿಸೇಸ ಅಂದ್ರೆ ಒಂದು ಅಯಸ್ಕಾಂತದ ಉತ್ರ ದ್ರುವಕ್ಕೆ ಇನ್ನೊಂದ್ ಅಯಸ್ಕಾಂತದ ಉತ್ರ ದ್ರುವ ಕಂಡ್ರೆ ಆಗದಿಲ್ಲ. ದೂರ ಓಡ್ತದೆ. ಅಂಗೆಯ ದಕ್ಷಿಣ ದ್ರುವಕ್ಕೆ ದಕ್ಷಿಣ ದ್ರುವ ಕಂಡ್ರೆ ಆಗದಿಲ್ಲ. ಅದೆ ಉತ್ರ-ದಕ್ಷಿಣ ದ್ರುವ ಗಪ್ ಅಂತ ಇಡ್ಕಬುಡ್ತವೆ.
ಅದಕ್ಕೇನ್ ಮಾಡ್ಬೇಕು ಈಗ?
ನಂಗೆ ಒಂದ್ ವಿಸ್ಯ ಗೊತ್ತಾಯ್ತು. ಮನುಸ್ರೂ ಇಂಗೆ ಆಡ್ತರೆ ಅಂತವ.
ಎಲ್ಲಿ ನೋಡಿದೆ?
ಗುಜರಾತ್ ಮು.ಮಂತ್ರಿ ನರೇಂದ್ರ ವೋದಿ ಅಂತ ಅವ್ನಲ್ಲ. ಅವ್ನು ಅಮೇರಿಕಕ್ಕೆ ಓಗಕೆ ಪಾಪ ಬಾಳ ಆಸೆ ಇಟ್ಕಂಡವ್ನಂತೆ. ಅಲ್ಲಿಗೋಗ್ಬೇಕಾದ್ರೆ ಅವ್ರು ಒಂದ್ ಸಟ್ರಿಪಿಕೇಟ್ ಕೊಡ್ಬೇಕಂತೆ. ಅವ್ರು ಅದ ಕೊಡ್ತಾ ಇಲ್ವಂತೆ. ಅಂಗಾಗಿ ವೋದಿ ಆಸೆ ಈಡೇರ್ತಾ ಇಲ್ವಂತೆ.
ಅವ್ರಿಗೇನು ಸಟ್ರಿಪಿಕೇಟ್ ಕೊಟ್ಟು ಬಾರಪ್ಪ ಅಂತ ಕರಿಯಕೆ?
ಅವ್ರು ಕೊಡನ ಅಂದ್ಕಂಡಿದ್ರಂತೆ, ಅಲ್ಲಿ ವಬ್ಬ ವೋದಿ ತರ ಇರ ಬಲಪಂತೀಯ ಅನ್ನನು ವೋದಿ ಇಲ್ಲಗೆ ಬಕ್ರೂಡ್ದು ಅಂದ್ನಂತೆ.
ವೋದಿ ತರನೇ ಅವ್ನೆ ಅಂತಿಯ, ಬಲ ಪಂತೀಯ ಅಂತಿಯ, ಮತ್ತೆ ಇವ್ನು ಓಗಕೆ ಅವುಂದೇನು ತಕ್ರಾರು?
ಇಲ್ಲೇ ನಾನೇಳಿದ ಪಾಮ್ರುಲ ಕ್ಯಲ್ಸ ಮಾಡ್ತಾ ಇರದು. ವೋದೀನೂ ಬಲ ಪಂತೀಯ, ಅವ್ರೂ ಬಲ ಪಂತೀಯ. ವಬ್ರಿಗ್ವಬ್ರಿಗೆ ಆಗದಿಲ್ಲ!!
ಬಲ ಪಂತೀಯ ಅಂದ್ರೇನು?
ಒಂದ್ ದಮ್ರವೇ ಸ್ರೇಷ್ಟ, ಯಲ್ಲಾರೂ ಅದ್ಕೇ ಸೇರಿಕಬೇಕು, ಇನ್ವಬ್ರು ಇಲ್ರೇಬಾದ್ರು ಅಂತ ನಂಬಿಕಂಡಿರರಿಗೆ ಬಲಪಂತೀಯರು ಅಂತಾರೆ. ಇಂತರು ಯಲ್ಲಾ ದಮ್ರುದಲ್ಲೂ ಇದ್ದರಂತೆ. ವೋದಿ ಹಿಂದೂ ಬಲಪಂತೀಯ, ಅಲ್ಲಿ ಯಾರೋ ಮುಸ್ಲಿಂ ಬಲಪಂತೀಯ ಇದ್ದನಂತೆ. ಅವ್ರು ವೋದಿ ಸಾವಿರಾರು ಜನ ಕ್ವಲೆ ನಡೀವಾಗ ಮುಕ್ಯ ಮಂತ್ರಿ ಆಗಿದ್ರೂ ಸುಮ್ಕೆ ಕೂತಿದ್ದ. ಲೇ ಸುಮ್ಕಿರಿ ಅಂತಲೂ ಏಳಿಲ್ವಂತೆ. ಅದ್ಕೆ ಅವ್ನು ಇಲ್ಲಿಗೆ ಬರಬಾದ್ರು ಅಂತ ಹಟ ಇಡ್ಕಂಡು ಕೂತಿದ್ದನಂತೆ. ಅಂಗಾಗಿ ವೋದಿ ಅಮೆರಿಕಕ್ಕೆ ಓಗದು ಗ್ಯಾರಂಟಿ ಇಲ್ವಂತೆ.
ಅವ್ನು ಬೇಕಾದ್ರೆ ಚಾನ್ಸು ಸಿಕ್ಕಿದ್ರೆ ಓಗ್ಲಿ ಬುಡು, ನಾನು ಮಾತ್ರ ಬಾರಪ್ಪ ಅಂದ್ರೂ ಆ ದೇಶಕ್ಕೆ ಓಗದಿಲ್ಲ.
ಯಾಕಣ್ಣ?
ಯಾಕೆ ಅಂದ್ರೆ ಅವ್ರು ಅವ್ರ ದೇಶದ ವಳಿಕೆ ನಾವು ಓಗ್ವಾಗ ಗೇಟಲ್ಲಿ ನಮ್ ಬಟ್ಟೆ ಬಿಚ್ಚಿ ಚೆಕ್ ಮಾಡ್ತರಂತೆ. ನಮ್ಮಂತರೋಗ್ಲಿ, ಅಬ್ದುಲ್ ಕಲಾಂ, ಜಾಜ್್ರ ಪನ್ರಾಂಡೀಸ್, ಸಾರುಕಾನ್ ಯಾರ್ನೂ ಬುಟ್ಟಿಲ್ವಂತೆ. ಅದ್ಕೆ ನಾನ್ ಮಾತ್ರ ನನ್ನುದ್ದುಕ್ಕೆ ಸುರುದ್ರೂ ಅಲ್ಲಿಗೆ ಮಾತ್ರ ಓಗದಿಲ್ಲ.
- ಈ.ಬಸವರಾಜು, ಮಲ್ಲೇನಹಳ್ಳಿ
ಕಾಯ್ರದಶ್ರಿ, ಕನ್ರಾಟಕ ಜಾÕನ ವಿಜಾÕನ ಸಮಿತಿ
ಈಮೇಲ್: ebಚಿsಚಿvಡಿಚಿರಿu@gmಚಿiಟ.ಛಿom
9448957666
E.Basavaraju
Mandara, 4th main, Rukmininagar
Mandara, 4th main, Rukmininagar
Nagasandra post, Bangalore-560012
9448957666
No comments:
Post a Comment