Wednesday, 11 April 2012

ಬರ್ಗೆಟ್ ದೇವ್ರಿಗೆ ಪರ ಮಾಡಿದಂಗಾಗ್ಯದೆ.


ಕಾಂಗ್ರೇಸ್ ಗೆ ಬನ್ನಿ ಬದಲಾವಣೆ ತನ್ನಿ
ಯಣ್ಣ, ಕಾಂಗ್ರೇಸಿಗೋಯ್ತಿಯ?
ಯಾಕಣ್ಣ ಇಂಗ್ ಕೇಳ್ತಿಯ? ನಂಗೂ ರಾಜಕೀಯಕ್ಕೂ ಯಾಕೋ ಆಗಿಬರ್ತಾ ಇಲ್ಲ. ಅದ್ಯಲ್ಲ ನಮಿಗೆ ಬ್ಯಾಡಕಣಣ್ಣ.
ಅಂಗಲ್ಲ, ಕಾಂಗ್ರೇಸ್ ನವ್ರು ಕಾಂಗ್ರೇಸ್ ಗೆ ಬನ್ನಿ, ಬದಲಾವಣೆ ತನ್ನಿ ಅಂತವ ಊರ್ ತುಂಬಾ ಪ್ಲೆಕ್್ಸ ಆಕ್ಯವ್ರೆ, ಅದ್ಕೆ ನೀನೇನಾರ ಓಯ್ತಾ ಇದ್ದೀಯೇನೋ ಅಂತ ಕೇಳ್ದೆ ಅಷ್ಟೆಯ.
ಇಲ್ಲ ಕಣಣ್ಣ, ನಾನು ಓಗದಿಲ್ಲ.
ಮತ್ತೆ ಯಲ್ಲ ನಿನ್ನಂಗೆ ಅಂದ್ರೆ ಕಾಂಗ್ರೇಸು ಬದಲಾಗದ್ಯಂಗೆ ಅಂತಿನಿ?
ನಾವು ಓಗ್ದೆ ಇದ್ರೆ ಅದು ಬದಲಾಗದಿಲ್ಲ ಅಂತಿಯ?
ಅದ ನಾನೇಳದಲ್ಲ, ನೀನೇಳದಲ್ಲ. ಹಿಂದೆ ರಾವುಲ್ ಗಾಂದಿ ಇಂಡೈರೆಕ್್ಟ ಆಗಿ ಏಳಿದ್ದ. ಯುವುಕ್ರು ರಾಜಕೀಯಕ್ಕೆ ಬನ್ನಿ ಅಂತವ. ಈಗ ಡೈರೆಕ್್ಟ ಆಗಿ ಏಳ್ತಾ ಅವ್ರೆ. ಈಗ್ಲೂ ಓಗ್ದೇ ಇದ್ರೆ ಯಂಗೆ?
ಈಗ ಅಲ್ಲೇ ಜಾಸ್ತಿ ಜನ ಆಗ್ಯವ್ರೆ. ಕಿತ್ತಾಡ್ಕಬ್ಯಾಡಿ ಅಂತವ ಸೋನಿಗಾಂದಿ ಬ್ಯಾರೆ ಏಳಿದ್ದಳಂತೆ. ಅಂತದ್ರಲ್ಲಿ ನಾನೂ ಓಗಿ ಕಿತ್ತಾಡು ಅಂತಿಯ?
ಕಿತ್ತಾಡಕಲ್ಲ, ನೀನು-ನಾನು ಓಗ್ಬೇಕಾಗಿರದು. ಬದ್ಲಾವಣೆ ತರಕೆ.
ಅಂಗಂದ್ರೇನು ಅಂತವ ಅಥ್ರ ಆಗ್ತಾ ಇಲ್ಲ ಕಣಣ್ಣ.
ಅಂಗಂದ್ರೆ  ನಾವ್ಯಲ್ಲ ಇಷ್್ಟ ದಿನ ಇದ್ದು ಬದ್ಲಾವಣೆ ತರಕೆ ಆಗ್ಲಿಲ್ಲ, ನಮ್ ಕೈಲಿ ಅದು ಆಗದಿಲ್ಲ. ಎಲ್ಲಿದ್ವೋ ಅಲ್ಲೇ ಇದ್ದಿವಿ, ಅದ್ಕೆ ನೀವು ಬಂದು ಬದ್ಲಾಯ್ಸಿ ಅಂತ ಕರೀತಾವ್ರೆ.
ನಾವ್ಯಲ್ಲ ಓದ್ ಮ್ಯಾಲೆ ಅವ್ರು ಏನ್ ಮಾಡ್ತರಂತೆ.
ನಾವ್ಯಲ್ಲ ಓದ್ ಮ್ಯಾಲೆ ಅವ್ರು ಹಿಂದಕ್ಕೋಯ್ತರೆ. ಅದೇ ಬದ್ಲಾವಣೆ.
ಎಲ್ಲಾರ ಉಂಟೇನಣ್ಣ, ಕಾಂಗ್ರೇಸಿನಲ್ಲಿರ ಲೀಡ್ರುಗಳೇ ವಬ್ರು ಕಾಲ ಇನ್ವಬ್ರು ಯಳೀತಾವ್ರೆ, ಅಂತದ್ರಲಿ ನಮ್ಮ ವಳಿಕ್ ಬುಟ್ಟು ಅವ್ರು ಆಚಿಗೋದರೆ? ಇದ್ರಲ್ಲಿ ಇನ್ನೇನೋ ಇರಬೌದು.
ಏನಿರ್ ಬೌದು ಅಂತಿಯ?
ಏನೂ ಇಲ್ಲ, ಉಡುಪಿ-ಚಿಕ್ಕಮಗಳೂರು ಎಂ.ಪಿ ಸೀಟ ಅಪರೂಪಕ್ಕೆ ಗೆದ್ದುಬುಟ್ಟವ್ರೆ. ಅದೊಂತರ ಬರ್ಗೆಟ್ ದೇವ್ರಿಗೆ ಪರ ಮಾಡಿದಂಗಾಗ್ಯದೆ. ಅಂಗಾಗಿ ಏನಾರ ವಸ ಸ್ಲೋಗನ್ ಕೊಡನ ಅಂತವ ಇಂಗ್ ಮಾಡ್ಯವ್ರೆ ಅಷ್ಟೆಯ. ಅವ್ರ ಬದ್ಲು ಮಾಡ್ತಿನಿ ಅಂತವ ನೀನೇನಾರ ವಳಿಕೋದ್ರೆ ನೀನೇ ಬದ್ಲಾಗಿ ಆಚಿಗೆ ಬರಬೇಕಾಯ್ತದೆ ಉಸಾರು.
- ಈ.ಬಸವರಾಜು, ಮಲ್ಲೇನಹಳ್ಳಿ

No comments:

Post a Comment