Tuesday, 24 April 2012

dinada vyangya

ಸ್ವಾಮಿಗಳ ನೋಡಕ್ಕೆ ಸೋನಿ ಗಾಂದಿ ಬಂದಳಂತೆ
ಯಣ್ಣ, ಸೋನಿ ಗಾಂದಿ ನಮ್ ಸ್ವಾಮಿಗಳ್ನ ನೋಡಕೆ ಬಂದಳಂತೆ, ನಾವೂ ಓಗಿ ಆ ವಮ್ಮುನ್ನ ನೋಡಿಕಂಡು ಬರನ?
ನಿಮ್ ಸ್ವಾಮಿಗಳು ಅಂದ್ರೆ ಯಾರಣ್ಣ?
ಯಾಕಣ್ಣ ಇಂಗಂತಿಯ?
ಯಾಕೆ ಅಂದ್ರೆ ಈಗ ಯಲ್ಲಾ ಜಾತಿಗೂ ವಬ್ರು ಸ್ವಾಮಿಗಳವ್ರೆ. ಆ ಜಾತಿವಳ್ಗೆ ಯಾವುದಾದ್ರೂ ಸಣ್ಣ ಜಾತಿಯಿದ್ರೆ ಅದ್ಕೂ ವಬ್ಬ ಸ್ವಾಮಿಗಳ್ನ ಮಾಡಿಕತ್ತರೆ, ಅದ್ಕೆ ಅಂಗಂದೆ.
ನಾನು ಸ್ವಾಮಿಗಳು ಅಂದಿದ್ದು ಸಿದ್ದಗಂಗೆ ಸ್ವಾಮಿಗಳ ಬಗ್ಗೆ. ಅವ್ರುನ್ನ ನೋಡಕೆ ಸೋನಿಗಾಂದಿ ಬಂದಳಂತೆ.
ಅದೇನು? ನಮ್ ಸ್ವಾಮಿಗಳ್ನ ನೋಡಕೆ ಸೋನಿ ಗಾಂದಿ ಅಲ್ಲಿಂದ ಇಲ್ಲೀತಕ ಬಂದಳು?
ಸ್ವಾಮಿಗಳು ಬರೋಬರಿ 105 ವಷ್ರ ಕಳೆದವ್ರಲ, ಇದ್ರ ಗುಟ್ಟ ತಿಳ್ಕಂಡು ತಾನೂ ಆದ್ರೆ ನೂರು ವಸ್ರ ಬದ್ಕನ ಅಂತ ಆಸೆ ಇಟ್ಕಂಡ್ ಬತ್ತಾ ಇರಬೌದು.
ಅದ್ಯಾಕಣ್ಣ ನೂರು ವಸ್ರ ಬದುಕ್ಲೇಬೇಕು ಅನ್ನ ಆಸೆ ಆ ವಮ್ಮುಂಗೆ?
ಏನಾರ ಮಾಡಿ ನನ್ ಮಗನ್ನ ಪದ್ರಾನಿ ಪಟ್ಟಕ್ಕೆ ಕುಂಡ್ರಿಸಿ ಕಣ್ತುಂಬ ನೋಡನ ಅಂತ ಆಸೆ ಇಬ್ರೇಕು.
ಅಷ್್ಟ ದಿನ ಬೇಕೆ ಅವ್ರ ಮಗ ಪದ್ರಾನಿ ಆಗಕೆ?
ಯಂಗೇಳ್ತಿಯಣ್ಣ, ಜನ ನಂಬಿಕಂಡು ಯಲೆಕ್ಷನ್ನಿಗೆ ನಿಂತ್ಕಳದು ಈಗ ಬಾಳ ಕಷ್ಟ. ಹಿಂದೆ ಇಂದ್ರಗಾಂದಿ ಒಂದು ತಟ್ಟೆ, ಒಂದು ಲೋಟ ಕೊಟ್ರೆ ಯಲ್ಲಾರು ಅವ್ರಿಗೇ ಓಟಾಕ್ತಾ ಇದ್ರು. ಈಗ ತಟ್ಟೆವಳಿಕೆ ಬಾಡಾಕಿ, ಲೋಟದ್ವಳಿಕೆ ಯಣ್ಣೆ ಆಕಿ ಅಂತರೆ. ಅದ ಕುಡ್ಕಂಡು ಬ್ಯಾರೆ ಪಾಟ್ರಿಯೋರು ಬಂದ್ರೆ ಅದೇ ತಟ್ಟೆ ಇಡಿತರೆ. ಅಂಗಾಗಿ ಸೋನಿ ಗಾಂದಿಗೆ ತನ್ ಮಗ ಯಾವಾಗ ಪದ್ರಾನಿ ಆಯ್ತನೆ ಅನ್ನದೇ ಡೌಟಾಗ್ಯದಂತೆ.
ಅದ್ಕಲ್ವಂತೆ ಕಣಣ್ಣ ಆ ವಮ್ಮ ಬತ್ತಾ ಇರದು?
ಮತ್ತಿನ್ಯಾಕಂತೆ?
ಈ ಕಾಂಗ್ರೇಸ್ ಪಕ್ಷದವ್ರು ಸೋನಿ ಗಾಂದಿತಕೋಗಿ; ಮೇಡಂ, ನಮ್ ಸ್ವಾಮಿಗಳಿಗೆ 105 ವಸ್ರ ಆಗ್ಯದೆ, ಅವ್ರು ಅಷ್್ಟ ವಸ್ರ ಬದಕಕೆ ನಾವೇ ಕಾರಣ. ನಮ್ ಆಸ್ಪತ್ರೇಲೇ ಅವ್ರಿಗೆ ಔಸ್ತಿ ಕೊಟ್ಟಿರದು, ಅದ್ಕೆ ನೀವು  ಬಲ್ರೇಬೇಕು ಅಂದ್ರಂತೆ.
ಇವ್ರೇಳಿದ್ದ ಆ ವಮ್ಮ ನಂಬಿ ಬುಡ್ತಂತ?
ಆ ವಮ್ಮ ಜಗತ್ನೇ ಸುತ್ತಿರದು, ರೀ ಸರಿಯಾಗಿ ಏಳ್ರಿ ಅಂತಂತೆ. ಆಗ ಇವ್ರು ಮೇಡಂ, ಯಲ್ಲಾರೂ ಸ್ವಾಮಿಗಳ್ನ ನೋಡಿಕಂಡು ವಳ್ಳೆ ಪ್ರಚಾರ ತಗತಾವ್ರೆ. ನೀವೂ ಒಂದ್ಸತಿ ಬಂದ್ರೆ ನಮಿಗೆ ವಳ್ಳೆ ಪ್ರಚಾರ ಸಿಕ್ತದೆ, ನೀವೂ ಉಸಾರಿಲ್ದಾಗ ಪಾರಿನ್ನಿಗೋಗಿದ್ರಲ ಅದ್ಕೆ ಇಲ್ಲಿ ಜನ ಏನೇನೋ ಮಾತಾಡಿಕತ್ತಾ ಅವ್ರೆ. ಅದ್ಕೆ ನೀವು ಬಂದ್ರೆ ಜನ ಮೇಡಂ ಮದ್ಲಂಗೇ ಜೋರಾಗ್ಯವ್ರೆ ಅಂದ್ಕತ್ತರೆ. ಜ್ವತಿಗೆ ನಿಮ್ಮತ್ತೆ ಇಂದ್ರಗಾಂದಿ ಅವ್ರು ಚಿಕ್ಕಮಂಗ್ಳೂರಲ್ಲಿ ಯಲೆಕ್ಷನ್ನಿಗೆ ನಿಂತಿದ್ದಾಗ ಬ್ಯಳ್ ಬ್ಯಳಿಗ್ಗೆ ನಮ್ ಸ್ವಾಮಿಗಳ್ನ ಭೇಟಿ ಮಾಡಿ ಅಡ್ ಬಿದ್ದು ಓಗಿದ್ರು. ಆಗ ಗೆದ್ರು. ಅದ್ಕೆ ನೀವೂ ಬನ್ನಿ ಪ್ಲೀಸ್ ಅಂದ್ರಂತೆ, ಆಗ ಸೋನಿ ಗಾಂದಿ ಆಯ್ತು ಅಂತವ ಬತ್ತಾ ಇರದಂತೆ. 
ಸ್ವಾಮಿಗಳ್ನ ನೋಡಿಕಂಡು ಸೀದ ಡೆಲ್ಲಿಕಡಿಕೆ ಓಗಬೌದು. ನಾವೆಲ್ಲಿ ನೋಡಕಾದತು?
ಸ್ವಾಮಿಗಳ್ನ ನೋಡಿದ್ ಮ್ಯಾಲೆ ಬರ ಬಂದಿರ ಅಳ್ಳೀಲಿ ಅದ್ಯಯನ ಮಾಡ್ಯರಂತೆ. ಆಗ ನಮ್ಮಂತರನ್ಯಲ್ಲ ಮಾತಾಡುಸ್ತರಂತೆ, ಆಗ ನೋಡಬೌದು, ಬಾರಣ್ಣ.
ಅದ್ಯಯನ ಅಂದ್ರೆ ಏನ್ ಮಾಡ್ತರಂತೆ?
ಒಂದ್ ಊರಿಗೋಗದು. ಅಲ್ಲಿ ಬರ ಯಾಕೆ ಬಂದದೆ? ಎಷ್ಟು ಜನಕ್ಕೆ ಏನೇನು ತ್ವಂದ್ರೆ ಆಗ್ಯದೆ, ಅದು ಬರಕ್ಕೆ ಏನು ಕಾರಣ. ಬರ ಬರದೇ ಇರಂಗೆ ಏನು ಮಾಡ್ಬೇಕು, ಈಗ ಆಗಿರ ತ್ವಂದ್ರೆ ಪರಿಹಾರ ಮಾಡಕ್ಕೆ ಏನೇನ್ ಮಾಡ್ಬೇಕು, ಅದ್ಕೆ ಎಷ್್ಟ ದುಡ್ ಬೇಕು, ಎಷ್್ಟ ಮೇವು, ಅಕ್ಕಿ, ರಾಗಿ ಬೇಕು ಅಂತವ ಅಂದಾಜ್ ಮಾಡದಿ. ಅದ್ಕೆ ಅದ್ಯಯನ ಅಂತಾರೆ.
ಇಷ್್ಟ ಯಲ್ಲ ಮಾಡಕ್ಕೆ ಏನಿಲ್ಲ ಅಂದ್ರುವೆ ಯಳ್್ಡ ಮೂರು ದಿನ ಬೇಕಪ್ಪ.  ಅಂತದ್ರಲಿ ಇವ್ರು ಅದ್ಯಲ್ಲಾನು ಮಾಡ್ಯರೆ?
ಏನ್ ಮಾಡ್ಯರು? ಓಯ್ತರೆ, ಜನಗಳ ಮುಂದೆ ನಿಂತ್ಕಂಡು ಯಳ್್ಡ ಮಾತಾಡ್ತರೆ, ಪೋಟ ತಗಿಸ್ಕತ್ತರೆ, ವಾಪಸ್ ಓಯ್ತರೆ. ಪೇಪ್ರಲಿ ಚನ್ನಾಗಿ ಬತ್ತದೆ.
ಮತ್ತೆ ಬರ ಪರಿಹಾರದ ಕತೆ?
ಆ ಮಾತ ಮಾತ್ರ ಕೇಳ್ ಬ್ಯಾಡ. ಅದು ದ್ವಡ್ ಕತೆ.
- ಈ.ಬಸವರಾಜು, ಮಲ್ಲೇನಹಳ್ಳಿ
ಕಾಯ್ರದಶ್ರಿ, ಕನ್ರಾಟಕ ಜಾÕನ ವಿಜಾÕನ ಸಮಿತಿ
ಈಮೇಲ್: ebasavraju@gmail.com
9448957666

--
E.Basavaraju
Mandara, 4th main, Rukmininagar 
Nagasandra post,  Bangalore-560012
9448957666


No comments:

Post a Comment