ಯಣ್ಣ, ಒಂದೊಂದ್ ಸತಿ ಸಣ್ ಉಡುಗ್ರು ದ್ವಡ್ ಮಾತಾಡ್ತರೆ, ದ್ವಡ್ಡರು, ಸಣ್ಣರು ಯಲ್ರೂ ತಿಳ್ಕಬೇಕು, ಅಂತ ಮಾತಾಡ್ತರೆ, ಏನಂತಿಯ?
ನೀನೇಳದ್ರಲ್ಲಿ ನಿಜ ಅದೆ. ಒಂದೊಂದ್ ಸತಿ ದ್ವಡ್ಡರು ಅನಿಸ್ಕಂಡರು ಸಣ್ ಮಾತಾಡ್ತರೆ, ಸಣ್ ಉಡುಗ್ರು ದ್ವಡ್ ಮಾತಾಡ್ತರೆ. ಅದಿಲ್ರಿ, ಈಗ ಯಾರು ದ್ವಡ್ ಮಾತಾಡಿದವ್ರು?
ಪಾಕಿಸ್ತಾನದ ಅಧ್ಯಕ್ಷ ಜದ್ರಾ ಅನ್ನನು ನಮ್ ದೇಶಕ್ಕೆ ಬಂದಿದ್ನಲ, ಜ್ವತೇಲಿ ಅವ್ನ ಮಗನ್ನೂ ಕರ್ಕಂಡ್ ಬಂದಿದ್ನಂತೆ. ಆ ಉಡ್ಗ ಅಪ್ಪನ್ ಜ್ವತೆ ತಿರುಗಾಡಿಕಂಡು ವಳ್ಳೆ ಊಟ ಮಾಡಿ ಸುವ್ಕೋಗಿಲ್ಲ. ಬಾಳ ಯೋಚ್ನೆ ಮಾಡಿ ದ್ವಡ್ ಮಾತಾಡ್ಯವ್ನೆ. ಅಂತರು ದೇಶ ಆಳಕೆ ಬಬ್ರೇಕು ನೋಡು.
ಜದ್ರಾ ಅಲ್ಲ ಕಣಣ್ಣ. ಜದ್ರಾರಿ ಅಂತ ಅವ್ನ ಯಸ್ರು. ಅವ್ನ ಮಗ ಅಂತ ದ್ವಡ್ ಮಾತೇನೇಳ್ಯವ್ನೆ?
ಭಾರತ-ಪಾಕಿಸ್ತಾನದ ಗಡಿವಳ್ಗೆ ಇರ ಜನ ನೋಡಿದ್ರೆ ಬಡತನದಿಂದ ನರಳ್ತ್ತಾ ಅವ್ರೆ, ಅವ್ರಿಗೆ ವಳ್ಳೇದ್ ಮಾಡದ್ ಬುಟ್ಟು ಯಳ್ಡೂ ದೇಶದವ್ರು ಮದ್ದು-ಗುಂಡಿಗೆ ದುಡ್ಡ ಸುರೀತಾ ಅವ್ರೆ, ಇವ್ರಿಗೆ ನಾಚಿಗೆ ಆಗಬೇಕು ಅಂತ ಅಂದವ್ನೆ.
ಇವ್ರಿಗೆ ನಾಚಿಗೆ ಆಗಬೇಕು ಅಂದ್ರೆ ಅವ್ರಪ್ಪುಂಗೂ ಏಳಿದಂಗಾಯ್ತು!
ಊ ಮತ್ತೆ, ಅವ್ರಪ್ಪುಂಗುವೆ, ಮನ್ ವೋಹನ್ ಸಿಂಗ್ ಇಬ್ರಿಗೂ ಏಳಿದಂಗಾಯ್ತು.
ಅವ್ರೇನಂದ್ರಂತೆ?
ಬಾಯಿಗೆ ಬೀಗ ಆಕ್ಯಂಡು ಸುಮ್ಕವ್ರಂತೆ.
ಈ ಉಡ್ಗ ಏಳಿರದ್ರಲಿ ನಿಜ ಅದೆ. ಒಂದ್ ಬಂದೂಕ ತಗಳಕೆ ಸಾವಿರಾರು ರುಪಾಯಿ ಸುರೀಬೇಕು. ಅಂತದ್ರಲಿ ನಮ್ ದೇಶದಲಿ ಎಷ್ಟು ಬಂದೂಕ ಇದ್ದವು? ಇನ್ನ ಪಾಕೀಸ್ತಾನದಲಿ ಎಷ್ಟಿರಬೌದು? ಅದ್ಯಾರೋ ಏಳ್ತಾ ಇದ್ರು, ಒಂದ್ ಯುದ್ದ ಮಾಡ ವಿಮಾನ ಕೊಂಡ್ಕಳಕೆ ಕೊಡ ದುಡ್ಡಲಿ ನೂರು ಆಸ್ಪತ್ರೇನೋ, ಇಸ್ಕೂಲ್ನೋ ಕಟ್ಟಬೌದಂತೆ.
ಅಂಗಾರೆ ಹತ್ತು ವಿಮಾನ ತಗಳ ದುಡ್ಡಲ್ಲಿ 1000 ಆಸ್ಪತ್ರೆ ಕಟ್ ಬೌದು ಅನ್ನು?
ಬರೀ ವಿಮಾನ ಅಷ್ಟೆ ಅಲ್ಲ ಕಣಣ್ಣ. ರಾಕೇಟು, ಅದು ಇದು ಅಂತ ದುಡ್ಡ ತಗಂಡೋಗಿ ಸುರೀತರೆ. ಅವ ಮಾರನು ನಮ್ ದೇಶಕ್ಕೂ ಮಾತ್ರನೆ. ಪಾಕಿಸ್ತಾನ್ಕೂ ಮಾತ್ರನೆ. ಅವ್ನು ದುಡ್ ಮಾಡಿಕತ್ತನೆ. ನಮ್ಮವು ದುಡ್ ಕೊಟ್ಟು ಅವ್ಯಲ್ಲಾನು ತಂದು ಮಡಿಕತ್ತವೆ, ಜನಗಳ್ನ ಬಡಪಾಯಿ ಮಾಡ್ತರೆ.
ಆ ಉಡ್ಗ ಏಳಿರದು ಕರೆಟ್ಟಾಗ್ಯದೆ ಬುಡು. ನಮ್ಮಿಸ್ಕೂಲ್ ನೋಡಿದ್ರೆ ಇನ್ನೂ ಚನ್ನಾಗಿ ಕಟ್ ಬೌದಾಗಿತ್ತು. ಆಸ್ಪತ್ರೇಲಿ ವಬ್ನೇ ಡಾಕ್ಟ್ರು. ಇನ್ನೂ ಯಳ್್ಡ ಜನ ಆಕಿದ್ರೆ, ಔಸ್ತಿ ಪುಕ್ಸಟ್ಟೆ ಕೊಟ್ರೆ ಎಷ್ಟೋಜನಕ್ಕೆ ಅನುಕೂಲ ಆಯ್ತದೆ. ಇವತ್ತು ಪೇಪ್ರಲಿ ಓದಿದೆ. ಹುಬ್ಳಿ ಅತ್ರ ಚನ್ನಾಗಿರ ಕುಡಿಯೋ ನೀರ ಕೊಡಕೆ ಮಿಸೀನ ಆಕ್ಯವ್ರಂತೆ. ಒಂದ್ ಗನ್ ತಗಳ ದುಡ್ಡಲಿ ಅಂತ ಮಿಸೀನ ಆಕಬೌದಾಗಿತ್ತು. ಇದ್ಯಲ್ಲಾನು ಮಾಡದ್ ಬುಟ್ಟು ಮಿಟ್ರಿಗೆ ದುಡ್ಡ ಸುಯ್ರದು ತಪ್ಪೆಯ.
ಅದ್ಕೆ ಅವ್ನು, ಮಿಟ್ರಿಗಾಕೊ ದುಡ್ಡಲಿ ಆಸ್ಪತ್ರೆ, ಇಸ್ಕೂಲು, ಪ್ಯಾಕ್ಟ್ರಿ ಕಟ್ಟಿ, ಜನಕ್ವಳ್ಳೇದಾಯ್ತದೆ ಅಂದವ್ನೆ.
ಅಂತವ್ರು ರಾಜಕೀಯಕ್ಕೆ ಬಂದು ದೇಶ ಆಳಂಗಾದ್ರೆ ಇದ್ಯಲ್ಲಾನೂ ಮಾಡಬೌದೇನಪ್ಪ, ನೋಡ್ಬೇಕು.
- ಈ.ಬಸವರಾಜು
No comments:
Post a Comment